‘ನನ್ನ ಮಗನಿಗಾಗಿ ಯಾವ ಪಕ್ಷದಿಂದಲೂ ಟಿಕೆಟ್ ಕೇಳಲ್ಲ’

203

ಪ್ರಜಾಸ್ತ್ರ ಸುದ್ದಿ

ಶ್ರೀರಂಗಪಟ್ಟಣ: ನಾನು ಎಂದಿಗೂ ಕುಟುಂಬ ರಾಜಕಾರಣ ಮಾಡಲ್ಲ. ನನ್ನ ಮಗನಿಗಾಗಿ ಯಾವ ಪಕ್ಷದಿಂದಲೂ ಟಿಕೆಟ್ ಕೇಳುವುದಿಲ್ಲವೆಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಟಿಕೆಟ್ ಕೊಡಿ, ಮಂತ್ರಿ ಸ್ಥಾನ ಕೊಡಿ ಎಂದು ಅಂಬರೀಶ್ ಯಾರ ಮುಂದೆಯೂ ಕೈಚಾಚಿಲ್ಲ. ನಾನು ಕೂಡ ಅವರ ದಾರಿಯಲ್ಲೇ ನಡೆಯುತ್ತೇನೆ ಎಂದರು.

ಕೆಂಪೇಗೌಡ ಜಯಂತಿ ಹಾಗೂ ಕೆಂಪೇಗೌಡ ಟ್ರಸ್ಟ್ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಬಿಜೆಪಿ ಸೇರುತ್ತಿದ್ದೇನೆ. ಕೇಂದ್ರ ಮಂತ್ರಿ ಸ್ಥಾನ ಕೇಳುತ್ತಿದ್ದೇನೆ. ಮಗನಿಗೆ ಮದ್ದೂರಿನಿಂದ ಟಿಕೆಟ್ ಕೇಳುತ್ತಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಅಂಬರೀಶ್ ಅವರ ಹೆಂಡ್ತಿಯಾಗಿ ಈ ಜನ್ಮದಲ್ಲಿ ಯಾರನ್ನೂ ಯಾವುದಕ್ಕೂ ಕೈಚಾಚುವುದಿಲ್ಲವೆಂದರು.




Leave a Reply

Your email address will not be published. Required fields are marked *

error: Content is protected !!