ಅಭಿಮಾನಿಗಳಿಗೆ ಖಡಕ್ ಮಾತು ಹೇಳಿದ ಕಿಚ್ಚ ಸುದೀಪ್

250

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ನಡೆದ ಘಟನೆ ಸಂಬಂಧ ಇಡೀ ಕನ್ನಡ ಚಿತ್ರರಂಗ ಖಂಡಿಸಿದೆ. ಪ್ರತಿಯೊಬ್ಬ ಕಲಾವಿದರು ಅವರ ಬೆಂಬಲಕ್ಕೆ ನಿಂತು ಅಗೌರವ ತೋರಿದವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ದರ್ಶನ್ ಜೊತೆಗೆ ನಿಂತುಕೊಂಡಿದ್ದಾರೆ. ಅದೇ ರೀತಿ ಕಿಚ್ಚ ಸುದೀಪ್ ಸಹ ಟ್ವೀಟ್ ಮಾಡಿ ಬೆಂಬಲಿಸಿದ್ದಾರೆ.

ಸುದೀಪ್-ದರ್ಶನ್ ಒಂದು ಕಾಲದಲ್ಲಿ ಒಳ್ಳೆಯ ಸ್ನೇಹಿತರು. ಅವರಿಬ್ಬರ ನಡುವೆ ಏನಾಗಿದೆ ಗೊತ್ತಿಲ್ಲ. ಆದರೆ, ಕೆಲ ವರ್ಷಗಳಿಂದ ದೂರು ಉಳಿದಿದ್ದಾರೆ. ಆದರೆ, ದರ್ಶನ್ ವಿಚಾರಕ್ಕೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಕ್ಕೆ ಅವರ ಅಭಿಮಾನಿಗಳಲ್ಲಿ ಕೆಲವರು ಈ ನಡೆಯನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸುದೀಪ್ ಖಡಕ್ ಉತ್ತರ ಕೊಟ್ಟಿದ್ದಾರೆ.

ನಾನು ನನ್ನ ಅಭಿಮಾನಿಗಳು, ಸ್ನೇಹಿತರ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಯಾಕಂದರೆ ನಾನು ಅವರಿಂದ ದೂರವಿಲ್ಲ. ಅವರೊಂದಿಗೆ ಬದುಕುತ್ತೇನೆ. ಅವರಿಗಾಗಿ ಬದುಕುತ್ತೇನೆ. ಅವರು ನನ್ನನ್ನು ಬದುಕಿಸುತ್ತಾರೆ ಎಂದು ಹೇಳುವ ಮೂಲಕ ಭಿನ್ನಾಭಿಪ್ರಾಯ ಬೇಡ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!