ಪ್ರಜಾಸ್ತ್ರ ಕ್ರೀಡಾ ಸುದ್ದಿ
ಆಡಿಲೇಡ್ ನಲ್ಲಿ ನಡೆದ ಟಿ-20 ವರ್ಲ್ಡ್ ಕಪ್ ನ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತ ಟೀಂ ಇಂಡಿಯಾ ವಿರುದ್ಧ ಟೀಕೆಗಳು ಜೋರಾಗಿವೆ. ಈ ಬಗ್ಗೆ ಮಾತನಾಡಿರುವ ಮಾಜಿ ನಾಯಕ ಕಪಿಲ್ ದೇವ್, ಭಾರತ ತಂಡವನ್ನು ಚೋಕರ್ಸ್ ಎನ್ನಬಹುದು. ಕೊನೆಯವರೆಗೂ ಬಂದು ಸೋಲುತ್ತಾರೆ ಎಂದಿದ್ದಾರೆ.
ಅಲ್ಲದೇ ಭಾರತ ತಂಡವನ್ನು ಅತಿಯಾಗಿ ಟೀಕೆ ಮಾಡಬೇಡಿ. ಆಟಗಾರರು ಕೆಟ್ಟದಾಗಿ ಆಡಿದ್ದಾರೆ ನಿಜ. ಆದರೆ, ಒಂದು ಪಂದ್ಯದ ಸೋಲಿನಿಂದ ಇಡೀ ತಂಡವನ್ನು ತುಂಬಾ ಕಟುವಾಗಿ ಟೀಕಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 6 ವಿಕೆಟ್ 168 ರನ್ ಗಳಿಸಿತ್ತು. ಈ ಸ್ಕೋರ್ ಚೇಸ್ ಮಾಡಿದ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 16 ಓವರ್ ಗಳಲ್ಲಿ 170 ರನ್ ಗಳಿಸಿ ಫೈನಲ್ ಗೆ ಪ್ರವೇಶ ಮಾಡಿತು. ಭಾನುವಾರ ಪಾಕ್-ಇಂಗ್ಲೆಂಡ್ ಫೈನಲ್ ಪಂದ್ಯ ನಡೆಯಲಿದೆ.