ಪ್ರಜಾಸ್ತ್ರ ಕ್ರೀಡಾ ಸುದ್ದಿ
ಬೆಂಗಳೂರು: ಇಲ್ಲಿಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಅಂಧರ್ ಟಿ-20 ವರ್ಲ್ಡ್ ಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತ 120 ರನ್ ಗಳ ಅಂತರದಿಂದ ಗೆಲುವು ಸಾಧಿಸಿತು. ಈ ಮೂಲಕ 3ನೇ ಬಾರಿಗೆ ಟಿ-20 ವರ್ಲ್ಡ್ ಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.
ಮೊದಲ ಬ್ಯಾಟ್ ಮಾಡಿದ ಭಾರತ ತಂಡ ಬರೋಬ್ಬರಿ 277 ರನ್ ಗಳಿಸಿತು. ಸುನೀಲ್ ರಮೇಶ್ 63 ಬೌಲ್ ಗಳಲ್ಲಿ 136, ಕ್ಯಾಪ್ಟನ್ ಅಜಯ್ ಕುಮಾರ್ ರೆಡ್ಡಿ 50 ಬೌಲ್ ಗಳಲ್ಲಿ 100 ರನ್ ಗಳಿಸಿ ಮಿಂಚಿದರು. ಇದರೊಂದಿಗೆ ಭಾರತ ಕೇವಲ 2 ವಿಕೆಟ್ ಕಳೆದುಕೊಂಡು 277 ರನ್ ಗಳಿಸಿತು.
ಈ ಬಿಗ್ ಸ್ಕೋರ್ ಚೇಸ್ ಮಾಡಿದ ಬಾಂಗ್ಲಾ ಪಡೆ 3 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತು. ಇದರಿಂದಾಗಿ ಭಾರತ 120 ರನ್ ಗಳಿಂದ ಜಯಿಸಿ ಲಲಿತ್ ಮೀನಾ, ಅಜಯ್ ಕುಮಾರ್ ತಲಾ ಒಂದೊಂದು ವಿಕೆಟ್ ಪಡೆದರು. ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ನಾಯಕ ಅಜಯ್ ಕುಮಾರ್ ರೆಡ್ಡಿಗೆ ಕಪ್ ನೀಡಿದರು. ಭಾರತ ತಂಡಕ್ಕೆ ಎಲ್ಲಡೆಯಿಂದ ಶುಭಾಶಯಗಳ ಸುರಿಮಳೆಯಾಗುತ್ತಿದೆ.