ಜಾರ್ಖಂಡ್ ಸರ್ಕಾರದ ವಿರುದ್ಧ ಜೈನ್ ಸಮುದಾಯ ಪ್ರತಿಭಟನೆ

150

ಪ್ರಜಾಸ್ತ್ರ ಸುದ್ದಿ

ಮುಂಬೈ: ಜಾರ್ಖಂಡ್ ದ ರಾಜ್ಯದ ಅತಿ ಎತ್ತರ ಪರ್ವತವಾಗಿರುವ ಪರಸ್ನಾಥ್ ದಲ್ಲಿರುವ ಸಮ್ಮೇದ್ ಶಿಖರ್ಜಿಯನ್ನು ಪ್ರವಾಸಿ ತಾಣವಾಗಿ ಮಾಡುವ ಸರ್ಕಾರದ ಯೋಜನೆಯನ್ನು ಖಂಡಿಸಿ, ಮುಂಬೈನಲ್ಲಿ ಜೈನ್ ಸಮುದಾಯದವರು ಬೃಹತ್ ಪ್ರತಿಭಟನೆ ನಡೆಸಿದರು.

ಗಿರಿದಿಹ್ ಜಿಲ್ಲೆಯ ಶಿಖರ್ಜಿಯು ಜೈನ್ ದೇಗುಲವನ್ನು ಹೊಂದಿದೆ. ಇದನ್ನು ಪ್ರವಾಸಿ ತಾಣವಾಗಿಸಬಾರದು ಅನ್ನೋದರ ಜೊತೆಗೆ ಗುಜರಾತಿನ ಪಾಲಿಟಾನಾದಲ್ಲಿರುವ ಜೈನ್ ದೇಗುಲ ಧ್ವಂಸ ಮಾಡಿರುವುದನ್ನು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.

ಶೇಠ್ ಆನಂದಜಿ ಕಲ್ಯಾಣಜಿ ಟ್ರಸ್ಟ್ ಹಾಗೂ ನೀಲಕಂಠ ಮಹಾದೇವ ಸೇವಾ ಸಮಿತಿ ನಡುವೆ ನಡೆದ ಗಲಾಟೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಜೈನ್ ಸಮುದಾಯದ ಮೇಲಿನ ದಾಳಿ. ಇದನ್ನು ಖಂಡಿಸಿ ದೇಶ್ಯಾದ್ಯಂತ 5 ಲಕ್ಷ ಜನರು ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ ಎಂದು ಮಹಾರಾಷ್ಟ್ರ ಸಚಿವ ಎಂ.ಪಿ ಲೋಧಾ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!