ಕಲೆಯಿಂದ ಸಮಾಜ ಬೆಸೆಯಲು ಸಾಧ್ಯ: ಸಂಸ್ಕೃತಿ ಚಿಂತಕ ಲಕ್ಷ್ಮಿರಾಮ್

637

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಮೈಸೂರು: ಜಿಲ್ಲೆಯ ಸರಗೂರಿನ ಜನ ಧ್ವನಿ ರೇಡಿಯೋ ಕೇಂದ್ರದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಗಾಯಕ, ಸಂಸ್ಕೃತಿ ಚಿಂತಕ ಲಕ್ಷ್ಮಿರಾಮ್, ಕಲೆ ಹಾಗೂ ಯುವ ಜನತೆ ಅನ್ನೋ ವಿಷಯದ ಕುರಿತು ಮಾತನಾಡಿದರು.

ಕಲೆಗಳು ಸಮಾಜ ಬೆಸೆಯಲು ದಾರಿಮಾಡಿ ಕೊಡಬೇಕು. ಪ್ರೀತಿ, ಮಮತೆ, ಸಂಯಮ ಈ ನೆಲದ ಮೂಲ ಸೆಲೆಯಾಗಿದೆ. ಆ ಸೆಲೆ ಬತ್ತದ ರೀತಿ ನಾವು ನಿಗಾ ವಹಿಸುವುದು ಅವಶ್ಯ ಎಂದು ಕಿವಿ ಮಾತುಗಳನ್ನು ಹೇಳಿದರು.

ಕಾರ್ಯಕ್ರಮದಲ್ಲಿ ಗಾಯಕಿ ಸಿಂಚನ, ನೃತ್ಯ ವಿದುಷಿ ಶುಭ್ರತಾ, ಚಿತ್ರ ಕಲಾವಿದೆ ಶೋಭಾ ಪ್ರಭಾಕರ್ ಹಾಗೂ ಜನ ಧ್ವನಿಯ ಶ್ರೀಕಾಂತ್, ನೀಲಾವತಿ, ನೇತ್ರಾವತಿ, ನಿಂಗ ರಾಜು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!