ಮುಸ್ಲಿಂ ಸಿಎಂ, ದಲಿತರಿಗೆ, ಮಹಿಳೆಯರಿಗೆ ಡಿಸಿಎಂ: ಎಚ್ಡಿಕೆ

141

ಪ್ರಜಾಸ್ತ್ರ ಸುದ್ದಿ

ಕೋಲಾರ: ಮುಂಬರುವ ವಿಧಾನಸಭಾ ಚುನಾವಣೆ ಸಂಬಂಧ ಜೆಡಿಎಸ್ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆ ನಡೆಸುತ್ತಿದ್ದು, ಮಂಗಳವಾರ ತಾಲೂಕಿನ ಕ್ಯಾಲೂರಿನಲ್ಲಿ ಮಾತನಾಡಿದ ಅವರು, ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯಕ್ಕೆ ಸಿಎಂ ಪಟ್ಟ, ದಲಿತ ಹಾಗೂ ಮಹಿಳೆಗೆ ಡಿಸಿಎಂ ಸ್ಥಾನ ಎಂದಿದ್ದಾರೆ.

ಕುಮಾರಸ್ವಾಮಿ ದೆಹಲಿಗೆ ಹೋದರೆ ತಾವು ಸಿಎಂ ಆಗಬಹುದು ಎಂದು ಸಿ.ಎಂ ಇಬ್ರಾಹಿಂ ಹೇಳಿದ್ದಾರೆ. ಈ ರೀತಿಯ ಚರ್ಚೆ ಮಾಡಲು ಅವಕಾಶ ಇರುವುದು ನಮ್ಮ ಪಕ್ಷದಲ್ಲಿ. ಮುಸ್ಲಿಂರು ನಮ್ಮವರೆ, ಆ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಬಾರದಂದೆನೂ ಇಲ್ಲ. ಹಾಗೂ ದಲಿತ ಹಾಗೂ ಮಹಿಳೆಯರಿಗೆ ಡಿಸಿಎಂ ಸ್ಥಾನ ನೀಡಲು ಸಿದ್ಧನಿದ್ದೇನೆ. ಬಿಜೆಪಿಯವರು ಒಂದೊಂದು ಭಾಗದಲ್ಲಿ ಒಂದೊಂದು ಸಮುದಾಯದ ಸಮಾವೇಶ ನಡೆಸಿದೆ. ಕಾಂಗ್ರೆಸ್ ಸಹ ಸಿದ್ಧತೆ ನಡೆಸಿದೆ. ಆದರೆ, ಸಮಾವೇಶಕ್ಕೂ ಸಮಾಜದ ಪರಿಸ್ಥಿತಿಗೂ ಹೊಂದಾಣಿಕೆ ಆಗುತ್ತಿಲ್ಲ ಎಂದು ಕುಟುಕಿದರು.




Leave a Reply

Your email address will not be published. Required fields are marked *

error: Content is protected !!