ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪೋಲಿ ಹುಡುಗರ ತರ ಮಾತನಾಡ್ತಾರೆ. ಮುಂಡೇವಾ ಮೊದಲು ಯುಪಿ ಸಿಎಂಗೆ ಲವ್ ಮಾಡಲು ಹೇಳಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಅಜೆಂಡಾ ಏನು ಎಂದು ಕಟೀಲ್ ತೋರಿಸಿದ್ದಾರೆ. ಚುನಾವಣೆಯಲ್ಲಿ ಇಂಥವರನ್ನು ಜನರು ಒದ್ದು ಹೊರಗೆ ಹಾಕಬೇಕು. ಬೆಳೆಯೋ ಮಕ್ಕಳಿಗೆ ಇವರು ಏನು ಪಾಠ ಮಾಡ್ತಾರೆ. ಮುಂಬೈನಲ್ಲಿ 12 ಜನರ ವಿಡಿಯೋ ಮಾಡಲಾಗಿದೆ. ಅವರು ಕೋರ್ಟಿಗೆ ಹೋಗಿ ಸ್ಟೇ ತಂದಿದ್ದಾರೆ.
ಸದಾನಂದಗೌಡ ಅವರು ಸ್ಟೇ ತಂದಿದ್ದಾರೆ. ವಿಡಿಯೋ ವಿಚಾರಕ್ಕೆ ಬಿಜೆಪಿಯಲ್ಲಿ ಮೂರು ಗುಂಪು ಇದೆ. ಒಂದು ಗುಂಪು ಕ್ಯಾಸೇಟ್ ಹೊರಗೆ ತರಬೇಕು. ಮತ್ತೊಂದು ಬೇಡ ಅಂತ. ಮುಂಬೈ ವಿಡಿಯೋ ಪ್ರಕರಣದಲ್ಲಿ ಮೂವರು ಸಚಿವರು ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.