ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಕನ್ನಡ ಸಿನಿ ದುನಿಯಾದ ಖಡಕ್ ವಿಲನ್ ಗಳಲ್ಲಿ ನಟ ಜೆಕೆ(ಕಾರ್ತಿಕ್ ಜಯರಾಮ್) ಸಹ ಒಬ್ಬರು. ಹಲವು ಸ್ಟಾರ್ ನಟರ ಎದುರು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಆ ಕರಾಳ ರಾತ್ರಿ, ಪುಟ 109 ಸೇರಿ ಅನೇಕ ಚಿತ್ರಗಳಲ್ಲಿ ಹೀರೋ ಆಗಿಯೂ ಮಿಂಚಿದ್ದಾರೆ.
ಸಧ್ಯ ನಟ ಜೆಕೆ ಕೈಯಲ್ಲಿ ಹಲವು ಚಿತ್ರಗಳಿವೆ. ಬೇಡಿಕೆ ನಟ ದಿಢೀರ್ ಎಂದು ಚಿತ್ರರಂಗದಿಂದ ದೂರ ಉಳಿಯುವ ಮಾತು ಹೇಳಿದ್ದಾರೆ. ಒಳ್ಳೆಯ ಸ್ಥಾನದಲ್ಲಿ ಇರುವಾಗಲೇ ಚಿತ್ರರಂಗದಿಂದ ದೂರವಾಗಬೇಕು ಅನ್ನೋ ಮಾತುಗಳನ್ನು ನಟ ಜೆಕೆ ಆಡಿದ್ದು, ಇದು ಹಲವರಿಗೆ ಅಚ್ಚರಿ ಮೂಡಿಸಿದೆ.
ನಟ ಜೆಕೆಗೆ ಯಾವುದೋ ಒಬ್ಬ ವ್ಯಕ್ತಿಯಿಂದ ತೊಂದರೆಯಾಗುತ್ತಿದೆಯಂತೆ. ಹೀಗಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಆದರೆ, ಅದ್ಯಾರು ಅನ್ನೋದು ಹೇಳಿಲ್ಲ. ಸಧ್ಯ ಐರಾವನ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಕಾಡ ಅನ್ನೋ ಚಿತ್ರ ಸಹ ಇದೆ. ಇದೆಲ್ಲವನ್ನು ಮುಗಿಸಿಕೊಡುತ್ತೇನೆ ಎಂದಿದ್ದಾರೆ.