ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಪದೆಪದೆ ಆಗಮಿಸುತ್ತಿರುವ ಪ್ರಧಾನಿ ಮೋದಿ ವಿರುದ್ಧ ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ. ಕಷ್ಟಕ್ಕೆ ಕರಿಬೇಡಿ. ಚುನಾವಣೆಗೆ ಮರಿಬೇಡಿ ಎನ್ನುವಂತೆ. ಚುನಾವಣೆ ಬಂದಾಗ ಕರ್ನಾಟಕಕ್ಕೆ ಚರಂಡಿ ಉದ್ಘಾಟನೆಗೂ ಬರಲು ತಯಾರಿ ಎಂದು ಟ್ವೀಟ್ ಮಾಡಿದೆ.
ಈಗಾಗ್ಲೇ ಕಾರ್ಯನಿರ್ವಹಿಸುತ್ತಿರುವ ಅಪೂರ್ಣ ಮೆಟ್ರೋ ಕಾಮಗಾರಿ ಉದ್ಘಾಟಿಸಲು ನಾಚಿಕೆ ಆಗಬೇಕು. ಹಾಲಿ ಮೆಟ್ರೋ ಟ್ರೇನ್ ಬೈಯಪ್ಪನಹಳ್ಳಿಗೆ ಕೊನೆಗೊಳ್ಳುತ್ತೆ. ಇನ್ನು ಕೆ.ಆರ್ ಪುರಕ್ಕೆ ಸಂಪರ್ಕ ಹೊಂದಿಲ್ಲ. ಆದರೆ, ಎಲೆಕ್ಷನ್ ಪ್ರೈಮ್ ಮಿನಿಸ್ಟರ್ ಗೆ ಇಂತಹ ಅವಾಂತರದ ಉದ್ಘಾಟನೆ ಸಾಧ್ಯವೇನೋ, ಬೆಂಗಳೂರು-ಮೈಸೂರು ರಸ್ತೆ ಕಾಮಗಾರಿ ಬಾಕಿ ಇರುವಾಗಲೇ ರೋಡ್ ಶೋ ಮಾಡಿ ಟೋಲ್ ಸುಲಿಗೆಗೆ ಆಕ್ರೋಶಗೊಂಡಿರುವ ಜನರಿಗೆ ಉತ್ತರವೇನು ಎಂದು ಕೇಳಲಾಗಿದೆ.
ನೆರೆ ಬಂದಾಗ ಕರ್ನಾಟಕ ಮುಳುಗಿ ಹೋದಾಗ ಬರದ ಪ್ರಚಾರಜೀವಿ ಮೋದಿ, ಚುನಾವಣೆ ಬಂದಾಗ ಮೂರು ದಿನಕ್ಕೊಮ್ಮೆ ಓಡಿ ಬರುತ್ತಿದ್ದಾರೆ. ನೆರೆ ಪರಿಹಾರ ಕೊಡದೆ ವಂಚಿಸಿದ್ದು ಯಾಕೆ ಎಂದು ಹೇಳುವ ಧೈರ್ಯ ತೋರಿಸುವವರೆ? ಸರ್ಕಾರದ ಶೇಕಡ 40ರಷ್ಟು ಭ್ರಷ್ಟಾಚಾರ, ಶಾಸಕರ ಮನೆಯಲ್ಲಿ ಕೋಟಿ ಕೋಟಿ ಸಿಕ್ಕಿರುವ ವಿಚಾರ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ವಾಗ್ದಾಳಿ ನಡೆಸಿದೆ.