2 ಕಾರು-ಬಸ್ ಅಪಘಾತ: ಒಂದೇ ಕುಟುಂಬದ ಮೂವರ ಸಾವು

165

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಓವರ್ ಟೇಕ್ ಮಾಡಲು ಹೋಗಿ ಎರಡು ಕಾರು ಹಾಗೂ ಕೆಎಸ್ಆರ್ ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿ, ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಕೊಲ್ಹಾರದ ಕುಪ್ಪಕಡ್ಡಿ ಹತ್ತಿರ ನಡೆದಿದೆ.

ಸುನಂದಾ ಮಲ್ಲಿಕಾರ್ಜುನ್ ಕಲಶೆಟ್ಟಿ(25), 3 ತಿಂಗಳ ಮಗು ಸುಮನ್ ಹಾಗೂ ಶರಣಮ್ಮ ಬಸವರಾಜ್ ಕಲಶೆಟ್ಟಿ(55) ಮೃತ ದುರ್ದೈವಿಗಳು. ಉಮೇಶ ಕಲಶೆಟ್ಟಿ, ಪತ್ನಿ ಸುರೇಖಾ, ಇವರ ಮಕ್ಕಳಾದ ಸುಹಾನ್(8 ತಿಂಗಳು), ಸಾನ್ವಿ(02) ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬಾಗಲಕೋಟೆಯಿಂದ ವಿಜಯಪುರಕ್ಕೆ ಹೊರಟಿದ್ದ ಬಸ್ ಹಾಗೂ ಎದುರುಗಡೆಯಿಂದ ಬಂದ ಎರಡು ಕಾರುಗಳ ನಡುವೆ ಓವರ್ ಟೇಕ್ ಮಾಡುವಾಗ ಈ ದುರಂತ ಸಂಭವಿಸಿದೆ. ಉಮೇಶ್, ಸುರೇಖಾ ಅವರನ್ನು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರೆಲ್ಲ ಕಲಬುರಗಿ ಮೂಲದವರೆಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!