ಪ್ರಜಾಸ್ತ್ರ ಸುದ್ದಿ
ಕುಣಿಗಲ್: ಕೆಎಸ್ಆರ್ ಟಿಸಿ ಬಸ್ ಚಾಲಕ ರಸ್ತೆಯಲ್ಲಿನ ಹಂಪ್ ಹಾರಿಸಿದ ಪರಿಣಾಮ ಕಂಡಕ್ಟರ್ ಕಾಲು ಕಟ್ ಆದ ಘಟನೆ ತಾಲೂಕಿನ ಗೊಟ್ಟಿಕೆರೆ ಬಳಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ಕಂಡಕ್ಟರ್ ಸಂಗಪ್ಪ ಅಕ್ಕಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಧರ್ಮಸ್ಥಳದಿಂದ ಕೋಲಾರಕ್ಕೆ ಹೊರಟಿದ್ದ ಕೆಎಸ್ಆರ್ ಟಿಸಿ ಬಸ್ ಚಾಲಕ ಮಹೇಶ್ ಬೇಜವಾಬ್ದಾರಿಯಿಂದ ಬಸ್ ಚಲಾಯಿಸಿದ್ದಾರೆ. ಇದರ ಪರಿಣಾಮ ಸಹೋದ್ಯೋಗಿ ಕಾಲು ಮುರಿದಿದೆ.