ಲಾಕ್ ಡೌನ್ ಉಲ್ಲಂಘನೆ: ವಿಜಯಪುರ ಪೊಲೀಸರ ವಿನೂತನ ಶಿಕ್ಷೆ

430

ವಿಜಯಪುರ: ಕರೋನಾದಿಂದಾಗಿ ಇಡೀ ದೇಶ ಲಾಕ್ ಡೌನ್ ಆಗಿದೆ. ಅನಗತ್ಯವಾಗಿ ಮನೆಯಿಂದ ಯಾರೂ ಹೊರ ಬರಬೇಡಿ ಎಂದು ದೇಶದ ಪ್ರಧಾನಿ ಕರೆ ಕೊಟ್ಟಿದ್ದಾರೆ. ಆದ್ರೂ ದೇಶದ ಹಲವು ಭಾಗಗಳಲ್ಲಿ ಜನರ ಓಡಾಟ ನಿಂತಿಲ್ಲ. ಅದೇ ರೀತಿ ಗುಮ್ಮಟನಗರಿಯಲ್ಲಿ ಜನರ ಓಡಾಟ ಅಲ್ಲಲ್ಲಿ ಇದೆ. ಹೀಗಾಗಿ ಜಿಲ್ಲಾ ಪೊಲೀಸ್ರು ವಿನೂತನ ಶಿಕ್ಷೆಯನ್ನ ನೀಡ್ತಿದ್ದಾರೆ.

ಯಾರು ಲಾಕ್ ಡೌನ್ ಉಲ್ಲಂಘಿಸ್ತಾರೋ ಅವರ ಹಣೆ ಮೇಲೆ ಮುದ್ರೆ ಒತ್ತಲಾಗ್ತಿದೆ. ನಾನು ಸಮಾಜದ ವಿರೋಧಿ ಇದ್ದೇನೆ ಅನ್ನೋ ಮುದ್ರೆ ಹಾಕ್ತಿದ್ದಾರೆ. ಈ ಮೂಲಕ ಮುಂದಿನ ಬಾರಿ ಲಾಕ್ ಡೌನ್ ಉಲ್ಲಂಘಿಸಿದಂತೆ ಎಚ್ಚರಿಕೆ ನೀಡ್ತಿದ್ದಾರೆ. ವಿಜಯಪುರ ಪೊಲೀಸರ ವಿನೂತ ಶಿಕ್ಷೆಗೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!