ಪ್ರಜಾಸ್ತ್ರ ಸುದ್ದಿ
ಮುಂಬೈ: ಮಹಾರಾಷ್ಟ್ರದ ಆಡಳಿತರೂಢ ಶಿವಸೇನೆ ಪಕ್ಷದ ಮುಖಂಡ ಲೋಕನಾಥ್ ಶಿಂಧೆ ಹಾಗೂ ಅವರ ತಂಡ ಈಗಾಗ್ಲೇ ರಾಜ್ಯಪಾಲರಿಗೆ ತಮ್ಮ ಸಹಿಯುಳ್ಳ ಪತ್ರ ನೀಡುವ ಮೂಲಕ, ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದಿದ್ದಾರೆ. ಬಿಜೆಪಿಯೊಂದಿಗೆ ಕೂಡಿಕೊಂಡು ಸರ್ಕಾರ ರಚನೆ ಮಾಡಲು ಲೋಕನಾಥ್ ಶಿಂಧೆ ಮುಂದಾಗಿದ್ದು, ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಗಡಿ ಮೈತ್ರಿ ಸರ್ಕಾರ ಇಂದೇ ಪತನವಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.
ಸಿಎಂ ಠಾಕ್ರೆ ಈಗಾಗ್ಲೇ ಸರ್ಕಾರ ವಿಸರ್ಜನೆಗೆ ಸಿದ್ಧ ಎಂದಿದ್ದಾರೆ. ಅವರ ಪುತ್ರ, ಸಚಿವ ಆದಿತ್ಯ ಠಾಕ್ರೆ ತಮ್ಮ ಟ್ವೀಟರ್ ಖಾತೆಯಿಂದ ಸಚಿವ ಅನ್ನೋ ಪದ ಕೈ ಬಿಟ್ಟಿದ್ದಾರೆ. ಶಿವಸೇನೆ ಹಿರಿಯ ನಾಯಕ, ಸಂಸದ ಸಂಜಯ್ ರಾವುತ್ ಸಹ ಸರ್ಕಾರ ಅಂತ್ಯದ ಮಾತು ಆಡಿದ್ದಾರೆ. ಹೀಗಾಗಿ ಬುಧವಾರವೇ ಸರ್ಕಾರ ಕೊನೆಯಾಗಲಿದೆ ಎಂದುಕೊಳ್ಳಲಾಗಿತ್ತು. ಆದರೆ, ಲೋಕನಾಥ್ ಶಿಂಧೆ ಬಿಜೆಪಿಯೊಂದಿಗೆ ಹೋದರೂ ಇನ್ನು ನಾಲ್ಕು ಶಾಸಕರ ಸಂಖ್ಯೆ ಕಡಿಮೆಯಾಗುತ್ತೆ. ಹೀಗಾಗಿ ಇನ್ನಷ್ಟು ಸೆಳೆಯುವ ಯತ್ನ ನಡೆಸಿದ್ದು, ಇದೇನಾಗುತ್ತೆ ಕಾದು ನೋಡಬೇಕಿದೆ.