ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ
ನಮ್ಮ ನಡುವೆ ಅನೇಕ ಸಾಧಕರಿದ್ದಾರೆ. ಅವರ ಪ್ರತಿಭೆ ಬೆಳಕಿಗೆ ಬರುವ ತನಕ ಅವರ ಬಗ್ಗೆ ನಿರ್ಲಕ್ಷ್ಯ ಇರುತ್ತೆ. ಒಮ್ಮೆ ಪ್ರತಿಭೆ ಅನಾವರಣಗೊಂಡರೆ ಜಗತ್ತೇ ಸಲಾಂ ಎನ್ನುತ್ತೆ. ಇನ್ನು ಕೆಲವು ಸಾಧಕರು ಅವರ ವೃತ್ತಿಗೂ ಸಾಧನೆಗೂ ಸಂಬಂಧವಿಲ್ಲದ ಕೆಲಸ ಮಾಡಿ ಸೈ ಎನಿಸಿಕೊಳ್ಳುತ್ತಾರೆ. ಅಂತವರ ಸಾಲಿಗೆ ಈ ಗಣಿತ ಶಿಕ್ಷಕ ಸೇರುತ್ತಾರೆ.
ಕಣಿವೆ ನಾಡು ಶ್ರೀನಗರದ ಗಣಿತ ಶಿಕ್ಷಕ ಬಿಲಾಲ್ ಅಹ್ಮದ್ ಮೆಕಾನಿಕಲ್ ವಿಭಾಗದವರು ಅಚ್ಚರಿ ಪಡುವಂತಹ ಕೆಲಸ ಮಾಡಿದ್ದಾರೆ. ಅದೇನು ಅಂದರೆ ಸೋಲಾರ್ ಕಾರು ಅವಿಷ್ಕಾರ ಮಾಡಿರುವುದು. ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೆ ಏರಿಕೆಯಾಗುತ್ತಿರುವ ಹೊತ್ತಿನಲ್ಲಿ ಸೋಲಾರ್ ಕಾರು ನೋಡಿ ಖುಷಿ ಪಡುವಂತಾಗಿದೆ.
ಗಣಿತ ಶಿಕ್ಷಕ ಬಿಲಾಲ್ ಅಹ್ಮದ್ ಯಾರ ಸಹಾಯ ಪಡೆಯದೆ ಕಳೆದ 11 ವರ್ಷಗಳಲ್ಲಿ ಪಕ್ಕಾ ಲೆಕ್ಕಾಚಾರದೊಂದಿಗೆ ಸೋಲಾರ್ ಕಾರು ತಯಾರಿಸಿದ್ದಾರೆ. ಇದಕ್ಕಾಗಿ 15 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ನಾಲ್ಕು ಜನರು ಕುಳಿತುಕೊಳ್ಳಬಹುದಾದ ಕಾರಿಗೆ ಸ್ಪೋರ್ಟ್ಸ್ ಟಚ್ ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಈ ಕಾರು ಎಲ್ಲೆಡೆ ಓಡಾಡುವ ಕಾಲ ದೂರವಿಲ್ಲ. ಬಿಲಾಲ್ ಅಹ್ಮದ್ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.