ಶೀಘ್ರದಲ್ಲಿ ಬಿಕ್ಕಟ್ಟು ಇತ್ಯರ್ಥ: ಸಿಎಂ ಬೊಮ್ಮಾಯಿ

202

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಚಿವ ಸಂಪುಟ ರಚನೆ ಬಳಿಕ ಖಾತೆ ಕ್ಯಾತೆ ಶುರುವಾಗಿದೆ. ಸಚಿವ ಆನಂದ್ ಸಿಂಗ್ ರಾಜೀನಾಮೆ ವಿಚಾರ ಭರ್ಜರಿ ಚರ್ಚೆಯಲ್ಲಿದೆ. ಗುರುವಾರ ಅವರು ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಮಾತ್ನಾಡಿರುವ ಸಿಎಂ, ನಾನು ಮತ್ತು ಆನಂದ್ ಸಿಂಗ್ 3 ದಶಕಗಳ ಸ್ನೇಹಿತರು. ಶೀಘ್ರದಲ್ಲಿ ಬಿಕಟ್ಟು ಇತ್ಯರ್ಥವಾಗಲಿದೆ ಎಂದಿದ್ದಾರೆ.

ನಿನ್ನೆ ದೂರವಾಣಿ ಮೂಲಕ ಮಾತ್ನಾಡಿದ್ದೇನೆ. ಇವತ್ತು ಮಾತ್ನಾಡುತ್ತೇನೆ. ಅವರ ವಿಚಾರ ನನಗೆ ಗೊತ್ತಾಗಿದೆ. ಪ್ರಸ್ತುತ ರಾಜಕೀಯ ವಿಚಾರಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಅವರು ಬಂದು ನನ್ನ ಜೊತೆ ಮಾತ್ನಾಡಿದ್ಮೇಲೆ ಎಲ್ಲವೂ ಬಗೆಹರಿಯಲಿದೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!