ಪ್ರಜಾಸ್ತ್ರ ಸುದ್ದಿ
ರಾಮನಗರ: ನಿನ್ನೆ ಪ್ರಧಾನ ಮಂತ್ರಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಅದೇ ರೀತಿ ಮುಖ್ಯಮಂತ್ರಿಗಳು ಮಾಡಬೇಕು. ನಾನು ಮಾಧ್ಯಮದಲ್ಲಿ ಮಾತ್ನಾಡಿದ್ರೆ, ಬೆಳಗ್ಗೆ ಹೆಚ್.ಡಿ ಕುಮಾರಸ್ವಾಮಿ, ರಾತ್ರಿ ಡಿ.ಕೆ ಶಿವಕುಮಾರ ಸಿಎಂ ಭೇಟಿಯಾಗುತ್ತಾರೆ ಎಂದು ಕಿಡಿ ಕಾರಿದ್ದಾರೆ.
ಕುಮಾರಸ್ವಾಮಿ ಹಾಗೂ ಡಿ.ಕೆ ಶಿವಕುಮಾರ ಜೊತೆ ಸಂಬಂಧ ಇರುವುದರಿಂದಲೇ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡಲು ಆಗುತ್ತಿಲ್ಲವೆಂದು ಆರೋಪಿಸಿದ್ರು. ಅಲ್ದೇ, ಎಲ್ಲಿಂದಲೋ ಬಂದವರನ್ನ, ಜೈಲಿಗೆ ಹೋಗಿ ಬಂದವನರನ್ನ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲವೆಂದು ಡಿಕೆಶಿಗೆ ತಿರುಗೇಟು ನೀಡಿದ್ರು.
ನನ್ನ ನಿಲುವುಗಳನ್ನ ಆಗಾಗ ಹೇಳುತ್ತೇನೆ. ಸಿಎಂ ಆಡಳಿತದ ಬಗ್ಗೆ ನಾನು ಒಪ್ಪಿದ್ದೇನೆ. ಆದ್ರೆ, ಸರ್ಕಾರದಲ್ಲಿ ನನಗೆ ಆಗುತ್ತಿರುವಾಗ ನೋವನ್ನ ಒಮ್ಮೊಮ್ಮೆ ತಡೆದುಕೊಳ್ಳಲು ಆಗದೆ ನಿಮ್ಮೆದರು ಹಾಗೂ ವರಿಷ್ಠರ ಎದುರು ಹಂಚಿಕೊಂಡಿದ್ದೇನೆ ಎಂದು ಹೇಳುವ ಮೂಲಕ, ರಾಜ್ಯ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲವೆಂದು ಮತ್ತೊಮ್ಮೆ ಪುನಃರುಚ್ಛರಿಸಿದ್ದಾರೆ.