ಶಾಸಕ ರವೀಂದ್ರ ಶ್ರೀಕಂಠಯ್ಯ ವರ್ಸಸ್ ಸಂಸದೆ ಸುಮಲತಾ

226

ಪ್ರಜಾಸ್ತ್ರ ಸುದ್ದಿ

ಮಂಡ್ಯ: ಸಂಸದೆ ಸುಮಲತಾ ಅಂಬರೀಶ ವಿರುದ್ಧ ಕ್ರಿಮಿನಕಲ್ ಪ್ರಕರಣ ದಾಖಲಿಸಿ ಎಂದು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದ್ದಾರೆ. ಸುಮಲತಾ ಸುತ್ತಾ ಗುಂಡಾಗಳು, ಫ್ರಾಡ್ ಗಳಿದ್ದಾರೆ. ಅಧಿಕಾರಿಗಳಿಗೆ ಧಮ್ಕಿ ಹಾಕಿ ಹಣಕ್ಕಾಗಿ ಪೀಡಿಸಲಾಗ್ತಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಮಾತ್ನಾಡಿರುವ ಸಂಸದೆ ಸುಮಲತಾ, ಅಕ್ರಮ ಗಣಿಗಾರಿಕೆ ನಿಂತಿರುವುದ್ರಿಂದ ಅವರಿಗೆ ಸಮಸ್ಯೆಯಾಗಿದೆ. ಹೀಗಾಗಿ ನನ್ನ ವಿರುದ್ಧ ಆರೋಪ ಮಾಡ್ತಿದ್ದಾರೆ. 8 ಬಾರಿ ದಿಶಾ ಸಭೆ ನಡೆಸಲಾಗಿದೆ. ಒಮ್ಮೆಯೂ ಸಭೆಗೆ ಬಂದಿಲ್ಲ. ನಿನ್ನೆ ಒಂದು ದಿನ ಬಂದು, ಆರೋಪ ಮಾಡ್ತಿದ್ದಾರೆ. ಇವರು ಅಭಿವೃದ್ಧಿ, ಕೋವಿಡ್ ಸಮಸ್ಯೆ, ಅಕ್ರಮ  ಗಣಿಗಾರಿಕೆ ನಿಲ್ಲಿಸುವುದು ಬೇಕಿಲ್ಲ. ಅವರ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಮಾತ್ನಾಡ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!