ತಾಯಿ, ಮಗ ಆತ್ಮಹತ್ಯೆಗೆ ಕಾರಣವೇನು?

158

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ತಾಯಿಯನ್ನು ಮನೆಗೆ ಕರೆದುಕೊಂಡು ಬಂದ ಕಾರಣಕ್ಕೆ ಪತ್ನಿ ಜಗಳವಾಡಿದ್ದು, ಇದರಿಂದ ಮನನೊಂದು ತಾಯಿ, ಮಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಾಯಿ ಭಾಗ್ಯಮ್ಮ(57) ಹಾಗೂ ಮಗ ಶ್ರೀನಿವಾಸ್(33) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್, ವಯಸ್ಸಾದ ತಾಯಿಯನ್ನು ಕರೆದುಕೊಂಡು ಬಂದಿದ್ದ. ಇದರಿಂದ ಪತ್ನಿ ಮನೆಯಲ್ಲಿ ಪದೆಪದೆ ಜಗಳವಾಡುತ್ತಿದ್ದಳಂತೆ. ಇದೆ ವಿಚಾರಕ್ಕೆ ಭಾನುವಾರ ಸಹ ಜಗಳ ನಡೆದಿದೆ. ಇದರಿಂದ ಮನನೊಂದು ಮನೆಯಲ್ಲಿ ನೇಣು ಹಾಕಿಕೊಂಡು ತಾಯಿ, ಮಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 8 ವರ್ಷದ ಹಿಂದೆ ಮದುವೆಯಾಗಿದ್ದ ಶ್ರೀನಿವಾಸ್ ಗೆ 6 ವರ್ಷದ ಮಗು ಇದೆ.




Leave a Reply

Your email address will not be published. Required fields are marked *

error: Content is protected !!