ಡೆಹರಾಡೂನ್: ಹೊಸ ಟ್ರಾಫಿಕ್ ನಿಯಮದಿಂದ ಜನ ಮೊದ್ಲೇ ಹೈರಾಣಾಗಿದ್ದಾರೆ. ಇದರ ನಡುವೆ ಕೆಲವು ಪ್ರಕರಣಗಳಲ್ಲಿ ಪೊಲೀಸ್ರು ಅತಿ ಬುದ್ದಿವಂತರಂತೆ ವರ್ತಿಸ್ತಿದ್ದಾರೆ. ಡೆಹರಾಡೂನ್ ಪೊಲೀಸ್ರು ಎತ್ತಿನ ಗಾಡಿಗೆ ದಂಡ ವಿಧಿಸಿ, ತಮ್ಮ ಬುದ್ದಿ ಎಷ್ಟಿದೆ ಅನ್ನೋದು ತೋರಿಸಿದ್ದಾರೆ.
ಡೆಹರಾಡೂನ್ ಹೊರವಲಯದ ಸಹಾಸ್ಪುರ್ ಮುಖ್ಯರಸ್ತೆಯಲ್ಲಿ ನಿಲ್ಲಿಸಿದ್ದ ಎತ್ತಿನ ಗಾಡಿಗೆ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಇದ್ರಿಂದ ಎತ್ತಿನ ಗಾಡಿ ಮಾಲೀಕ ರಿಯಾಜ ಹಸನಗೆ ಶಾಕ್ ಆಗಿದೆ. ಅಲ್ದೇ ಇದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ದಂಡ ವಿಧಿಸಿದ ಪೊಲೀಸರ ಬುದ್ದಿಗೆ, ಅವರ ಜ್ಞಾನಕ್ಕೆ ಬಾಯಿಗೆ ಬಂದಂತೆ ಬೈಯಲಾಗ್ತಿದೆ.
ತನ್ನ ಹೊಲಕ್ಕೆ ಸಂಬಂಧಿಸಿದಂತೆ ಮುಖ್ಯ ರಸ್ತೆಯ ಪಕ್ಕದಲ್ಲಿ ಎತ್ತಿನ ಗಾಡಿ ನಿಲ್ಲಿಸಿದ್ದಾನೆ. ಇದಕ್ಕೆ ದಂಡ ವಿಧಿಸಿದ್ದಕ್ಕೆ ಆಕ್ರೋಶ ವ್ಯಕ್ತವಾಗ್ತಿದ್ದಂತೆ ಚಾನಲ್ ರದ್ದು ಮಾಡಲಾಗಿದೆ. ಇಂತಾ ಮಹಾನ್ ಪೊಲೀಸರನ್ನ ಮೊದ್ಲು ಕೆಲಸದಿಂದ ತೆಗೆದು ಮನೆಗೆ ಕಳಿಸಬೇಕೆಂದು ಆಗ್ರಹಿಸಲಾಗಿದೆ.