ತುಮಕೂರು: ಈ ದೇಶದಲ್ಲಿ ಜಾತಿ ವ್ಯವಸ್ಥೆ ಎಷ್ಟೊಂದು ಆಳಕ್ಕೆ ಇಳಿದಿದೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ದಾಖಲಾಗಿದೆ. ಅದು ಈ ಬಾರಿ ರಾಜ್ಯದ ಸಂಸದರೊಬ್ಬರಿಗೆ ಅಸ್ಪೃಶ್ಯತೆಯ ಬಿಸಿ ಮುಟ್ಟಿದೆ. ಇದ್ರಿಂದಾಗಿ ಚಿತ್ರದುರ್ಗದ ಸಂಸದ ನಾರಾಯಣಸ್ವಾಮಿ ಗ್ರಾಮದಿಂದ ವಾಪಸ್ ಆಗಿದ್ದಾರೆ ಎನ್ನಲಾಗ್ತಿದೆ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಗೊಲ್ಲರಹಟ್ಟಿಯಲ್ಲಿ ಗ್ರಾಮದಲ್ಲಿ ಈ ಒಂದು ಅಮಾನವೀಯ ಘಟನೆ ನಡೆದಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ದಲಿತ ಅನ್ನೋ ಕಾರಣಕ್ಕೆ ಯಾಧವ ಸಮುದಾಯದ ಜನ ಸಂಸದ ನಾರಾಯಣಸ್ವಾಮಿ ಅವರನ್ನ, ಊರೊಳಗೆ ಸೇರಿಸಿಕೊಂಡಿಲ್ಲ ಎನ್ನಲಾಗ್ತಿದೆ. ನೀವು ಬದಲಾವಣೆ ಆಗ್ಲಿಲ್ಲ ಅಂದ್ರೆ ಏನು ಮಾಡುವುದು ಅಂತಾ ಊರಿನ ಜನತೆಗೆ ಕೈಮುಗಿದ ವಾಪಸ್ ಆಗಿದ್ದಾರೆ.