ಪ್ರಜಾಸ್ತ್ರ ಅಪರಾಧ ಸುದ್ದಿ
ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದಕ್ಕೆ ದಲಿತ ಯುವಕನನ್ನು ಹತ್ಯೆ ಮಾಡಿದ ಘಟನೆ ಹೈದ್ರಾಬಾದ್ ನ ಸಿಕಂದರಬಾದ್ ನಲ್ಲಿರುವ ಮಡ್ರೆಡ್ ಪೆಲ್ಲಿ ಎಂಬಲ್ಲಿ ನಡೆದಿದೆ. ನಾಗರಾಜು ಅನ್ನೋ ದಲಿತ ಯುವಕ ಹತ್ಯೆಯಾಗಿದ್ದಾನೆ.
ಸೈಯ್ಯದ್ ಅಶ್ರಿನ್ ಸುಲ್ತಾನಾ ಹಾಗೂ ನಾಗರಾಜು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇದರಿಂದ ಕೋಪಗೊಂಡ ಅಶ್ರಿನ್ ಕುಟುಂಬಸ್ಥರು, ನಡುರಸ್ತೆಯಲ್ಲಿ ರಾಡ್ ನಿಂದ ಗಂಭೀರವಾಗಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಇದನ್ನು ನೋಡುತ್ತಾ ನಿಂತಿದ್ದ ಯಾರೂ ಬಿಡಿಸಲು ಬರಲಿಲ್ಲ. ಮೊಬೈಲ್ ನಲ್ಲಿ ಶೂಟ್ ಮಾಡುತ್ತಿದ್ದರು ಎಂದು ಅಶ್ರಿನ್ ಕಣ್ಣೀರು ಹಾಕುತ್ತಿದ್ದಾಳೆ.
ನಾಗರಾಜು ಹಾಗೂ ಪತ್ನಿ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿ ಹೈದ್ರಾಬಾದ್ ನ ಸರೂರ್ ನಗರದ ರಸ್ತೆಯಲ್ಲಿ ಅವರನ್ನು ಅಡ್ಡಗಟ್ಟಿದ್ದಾರೆ. ಅದರಲ್ಲೊಬ್ಬ ಅಶ್ರಿನ್ ಸಹೋದರ ಸೈಯದ್ ಮೊಬಿನ್ ಅಹ್ಮದ್ ಹಾಗೂ ಆತನ ಸಹಚರ ಮೊಹಮ್ಮದ್ ಮಸೂದ್ ಅಹ್ಮದ್ ಹತ್ಯೆ ಮಾಡಿದ್ದಾರೆ. ಇವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಭೀಕರವಾಗಿ ಹತ್ಯೆ ಮಾಡುತ್ತಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾಗರಾಜು ಪತ್ನಿ ಎಷ್ಟೊಂದು ಕೇಳಿಕೊಂಡರೂ ಯಾರೊಬ್ಬರೂ ಸಹಾಯಕ್ಕೆ ಬಂದಿಲ್ಲ. ಅವರಿಂದ ಏನೂ ಮಾಡಲು ಆಗದಿದ್ದರೆ ಯಾಕೆ ಬಂದರು ಎಂದು ಕಣ್ಣೀರು ಹಾಕಿದ್ದಾಳೆ. ಪತಿಯನ್ನು ಕಳೆದುಕೊಂಡ ನಶ್ರಿನ್ ಅಲಿಯಾಸ್ ಪಲ್ಲವಿ ಇದೀಗ ಒಂಟಿಯಾಗಿದ್ದಾಳೆ.