ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರೌಡಿಗಳು ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, 90ರ ದಶಕದಲ್ಲಿ ನನ್ನ ಹೆಸರು ಸಹ ರೌಡಿ ಶೀಟರ್ ಲಿಸ್ಟ್ ನಲ್ಲಿತ್ತು. ಆದರೆ, ನಾನು ಯಾರ ಮೇಲೂ ದಬ್ಬಾಳಿಕೆ ಮಾಡಿರ್ಲಿಲ್ಲ ಎಂದಿದ್ದಾರೆ.
ಕೇವಲ ರಾಜಕೀಯಕ್ಕಾಗಿ ನನ್ನ ಹೆಸರು ರೌಡಿ ಶೀಟರ್ ಲಿಸ್ಟ್ ಗೆ ಸೇರಿಸಲಾಗಿತ್ತು. ದೇವರಾಜ್ ಅರುಸ್ ಅವರು ಮುಖ್ಯಮಂತ್ರಿಯಾಗಿದ್ದ ವಿಧಾನಸೌಧ 3ನೇ ಮಹಡಿಯಲ್ಲಿ ರೌಡಿಗಳ ಜೊತೆಗೆ ಚರ್ಚೆ ನಡೆಸ್ತಿದ್ದರು ಅಂತಾ ಹೇಳಿದರು.