ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಘೋಷಣೆ: ಕರ್ನಾಟಕಕ್ಕೆ ಇಷ್ಟೊಂದು ಕಡಿಮೆನಾ..?

402

ನವದೆಹಲಿ: ಪ್ರವಾಹ, ಭೂಕುಸಿತ, ಚಂಡಮಾರುತ ಸೇರಿದಂತೆ ಪ್ರಕೃತಿ ವಿಕೋಪದಿಂದ ಹೈರಾಣಾದ ರಾಜ್ಯಗಳಲ್ಲಿ ಕೇಂದ್ರ ವಿಪತ್ತು ಪರಿಹಾರ ನಿಧಿ ಘೋಷಣೆ ಮಾಡಿದೆ. 8 ರಾಜ್ಯಗಳಿಗೆ ಹೆಚ್ಚುವರಿಯಾಗಿ ನೀಡಬೇಕಿದ್ದು ಪರಿಹಾರವನ್ನ ಇಂದು ಬಿಡುಗಡೆ ಮಾಡಿದೆ.

ಕೇಂದ್ರ ಗೃಹ ಸಚಿವ ಅಮಿತ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿ 8 ರಾಜ್ಯಗಳಿಗೆ ಪರಿಹಾರ ಘೋಷಣೆ ಮಾಡಲಾಗಿದೆ. 7 ರಾಜ್ಯಗಳಿಗೆ ಘೋಷಿಸಿರುವ ಪರಿಹಾರದ ಮುಂದೆ ಕರ್ನಾಟಕಕ್ಕೆ ಸಿಕ್ಕಿರುವುದು ಅತೀ ಕಡಿಮೆಯಾಗಿದೆ.

ಮಹಾರಾಷ್ಟ್ರಕ್ಕೆ 1,758.18 ಕೋಟಿ, ರಾಜಸ್ಥಾನಕ್ಕೆ 1090.06 ಕೋಟಿ, ಪಶ್ಚಿಮ ಬಂಗಾಳಕ್ಕೆ 1,090.68 ಕೋಟಿ ನೀಡಲಾಗಿದೆ. ಬಿಹಾರ 953.17 ಕೋಟಿ, ಕೇರಳ 460.77 ಕೋಟಿ, ನಾಗಾಲ್ಯಾಂಡ್ ಗೆ 177.37 ಕೋಟಿ, ಒಡಿಶಾಗೆ 179.64 ಕೋಟಿ, ಕರ್ನಾಟಕಕ್ಕೆ 11.48 ಕೋಟಿ ಬಿಡುಗಡೆ ಮಾಡಲಾಗಿದೆ. ಹೀಗೆ ಒಟ್ಟು 7,751 ಕೋಟಿ ಬಿಡುಗಡೆ ಮಾಡಲಾಗಿದೆ.

ಇದೆಲ್ಲವನ್ನ ನೋಡಿದ್ರೆ ಕರ್ನಾಟಕಕ್ಕೆ ಮೂಗಿಗೆ ಬೆಣ್ಣೆ ಸವರಿದಂತಾಗಿದೆ. ಪ್ರವಾಹದಿಂದ ಸಾವಿರಾರು ಕೋಟಿ ನಷ್ಟವಾಗಿದೆ. ಆಗ್ಲೂ ಸರಿಯಾದ ಪರಿಹಾರ ಕೊಟ್ಟಿಲ್ಲ. ತೆರಿಗೆ ಹಣದಲ್ಲಿ ಬರಬೇಕಾದ ಪಾಲಿನ ಹಣ ನೀಡಿಲ್ಲ. ಈಗ ನೋಡಿದ್ರೆ 2018-19 ಸಾಲಿನ ಆರ್ಥಿಕ ವರ್ಷದ ಬರ ಪರಿಹಾರಕ್ಕಾಗಿ 11.48 ಕೋಟಿ ನೀಡಲಾಗಿದೆ. ರಾಜ್ಯದ 22 ಬಿಜೆಪಿ ಸಂಸದರು ಅದೇನು ಮಾಡ್ತಿದ್ದಾರೋ ದೇವರೆ ಬಲ್ಲ.




Leave a Reply

Your email address will not be published. Required fields are marked *

error: Content is protected !!