ನಾಳೆ ನೆಲೆ ಸಂಭ್ರಮ ಹಾಗೂ ಪುಸ್ತಕ ಬಿಡುಗಡೆ

730

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಸಿಂದಗಿ: ಸಂಗಮೇಶ್ವರ ವಿದ್ಯಾಲಯ ಸಹಯೋಗದೊಂದಿಗೆ ನೆಲೆ ಪ್ರಕಾಶನ ಸಂಸ್ಥೆ ವತಿಯಿಂದ ನೆಲೆ ಸಂಭ್ರಮ-2022 ಕಾರ್ಯಕ್ರಮ ಅಕ್ಟೋಬರ್ 28ರಂದು ಪಟ್ಟಣದಲ್ಲಿ ಆಯೋಜಿಸಲಾಗಿದೆ. ಸಂಗಮೇಶ್ವರ ವಿದ್ಯಾಲಯದ ಸಭಾವನದಲ್ಲಿ ಶುಕ್ರವಾರ ಸಂಜೆ 4ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇದೆ ವೇಳೆ ಹಿರಿಯ ಕಥೆಗಾರ ಡಾ.ಚನ್ನಪ್ಪ ಕಟ್ಟಿ ಅವರ ನೆನಹು ಮಂದಾರ ಕೃತಿ ಬಿಡುಗಡೆ ಹಾಗೂ ಕವಿ ಗೋಷ್ಠಿ ನಡೆಯಲಿದೆ. ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಿಕೊಳ್ಳಲಿದ್ದಾರೆ. ಹಿರಿಯ ಸಂಶೋಧಕ ಡಾ.ಎಸ್.ಕೆ ಕೊಪ್ಪ ಅಧ್ಯಕ್ಷತೆ, ನೆಲೆ ಪ್ರಕಾಶನದ ಸಂಸ್ಥಾಪಕ ಸದಸ್ಯ ಡಾ.ಎಂ.ಎಂ ಪಡಶೆಟ್ಟಿ ಆಶಯ ನುಡಿಗಳನ್ನು ಆಡಲಿದ್ದಾರೆ.

ನೆನಹು ಮಂದಾರ ಕೃತಿಯನ್ನು ಹಿರಿಯ ಪತ್ರಕರ್ತ ಪ್ರೊ.ಶಾಂತು ಹಿರೇಮಠ ಬಿಡುಗಡೆಗೊಳಿಸಲಿದ್ದಾರೆ. ಶಿಕ್ಷಕ ಯಶವಂತರಾಯಗೌಡ ಬಿರಾದಾರ ಕೃತ ಪರಿಚಯ ಮಾಡಲಿದ್ದಾರೆ. ಪಿಇಎಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಪಿ ಕರ್ಜಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ.ಶ್ರೀಶೈಲ ನಾಗರಾಳ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಹಿರಿಯ ಸಂಶೋಧಕ ಡಿ.ಎನ್ ಅಕ್ಕಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತಾಲೂಕು ಪಂಚಾಯ್ತಿ ಕೆಡಿಪಿ ಸದಸ್ಯ ಶಿವಕುಮಾರ್ ಬಿರಾದಾರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!