ಪ್ರಜಾಸ್ತ್ರ ಸುದ್ದಿ
ಮೈಸೂರು: ರಾಜ್ಯದಲ್ಲಿ ಈಗಾಗ್ಲೇ ಮಳೆ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಈಗ ಚಳಿಗಾಲ ಶುರುವಾಗಿದೆ. ರಾಜ್ಯದ ಜನರು ಚಳಿಗೆ ನಡಗುತ್ತಿದ್ದಾರೆ. ಇದರ ಜೊತೆಗೆ ಮಳೆಯ ಕಾಟ ಮತ್ತೆ ಶುರುವಾಗಿದೆ.
ಬುಧವಾರ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಕಾಣಸಿಕೊಂಡಿದೆ. ಉಳಿದ ಕಡೆ ಮೋಡ ಮುಸುಕಿದ ವಾತಾವರಣವಿದೆ. ಸೂರ್ಯನ ದರ್ಶನ ಇಂದು ಆಗಿಲ್ಲ. ಹಲವು ಕಡೆ ಜಿಟಿಜಿಟಿ ಮಳೆಯಾಗುವ ಮೂಲಕ ಶೀತಗಾಳಿ ಬೀಸುತ್ತಿದೆ.
ಚಳಿಗೆ ಬೆಳಗ್ಗೆ ಏಳುವುದು ತಡವಾಗುವುದರ ಜೊತೆಗೆ ಕೆಲಸ ಕಾರ್ಯಗಳು ಸಹ ನಿಧಾನವಾಗುತ್ತಿವೆ. ಹೀಗಿರುವಾಗ ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯಪುರ, ಹಾವೇರಿ ಭಾಗದಲ್ಲಿ ಮಳೆಯಾಗುವ ಕುರಿತು ಮಾಹಿತಿ ನೀಡಲಾಗಿದೆ.