ವಿಮರ್ಶಕ ಡಾ.ಆಮೂರ ಅವರಿಗೆ ‘ನೃಪತುಂಗ ಪ್ರಶಸ್ತಿ’

998

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹಿರಿಯ ವಿಮರ್ಶಕ ಡಾ.ಜಿ.ಎಸ್ ಆಮೂರ ಅವರಿಗೆ 2020ನೇ ಸಾಲಿನ ನೃಪತುಂಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ ಅಧ್ಯಕ್ಷತೆಯ ಸಮಿತಿಯು ಆಮೂರ ಅವರನ್ನ ಆಯ್ಕೆ ಮಾಡಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸ್ಥಾಪಿಸಿರುವ ಈ ಪ್ರಶಸ್ತಿಯ ಮೊತ್ತ 7 ಲಕ್ಷದ 1 ರೂಪಾಯಿ ಆಗಿದೆ. ಈ ಮೊತ್ತ ಜ್ಞಾನಪೀಠ ಪ್ರಶಸ್ತಿಗಿಂತ 1 ರೂಪಾಯಿ ಹೆಚ್ಚಿಗೆ ಇದೆ.

ಇನ್ನು 45 ವರ್ಷದೊಳಗಿನ ಸಾಹಿತಿಗಳಿಗೆ ನೀಡುವ ಮಯೂರ ವರ್ಮ ಪ್ರಶಸ್ತಿಗೆ ಡಾ.ಧನಂಜಯ ಕುಂಬ್ಳೆ, ಅಕ್ಷತಾ ಕೃಷ್ಣಮೂರ್ತಿ, ಡಾ.ಸಂತೋಷ ಹಾನಗಲ್ಲ, ಆರ್.ಪ್ರಭಾಕರ, ವನಿತಾ ಶೇಟ್ ಅವರನ್ನ ಆಯ್ಕೆ ಮಾಡಲಾಗಿದೆ. ಇದು 25 ಸಾವಿರ ರೂಪಾಯಿ ನಗದು ಹೊಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಯಾವಾಗ ಅನ್ನೋದು ತಿಳಿದು ಬಂದಿಲ್ಲ.




Leave a Reply

Your email address will not be published. Required fields are marked *

error: Content is protected !!