ಹಿರಿಯ ವಿದ್ವಾಂಸ ಪ್ರೊ.ಮಲ್ಲೇಪುರಂಗೆ ‘ನೃಪತುಂಗ ಪ್ರಶಸ್ತಿ’

548

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಬೆಂಗಳೂರು: ಕನ್ನಡದ ಜ್ಞಾನಪೀಠ ಪ್ರಶಸ್ತಿ ಎಂದೇ ಖ್ಯಾತಿ ಪಡೆದಿರುವ ನೃಪತುಂಗ ಪ್ರಶಸ್ತಿಗೆ ಈ ಬಾರಿ, ನಾಡಿನ ಹಿರಿಯ ವಿದ್ವಾಂಸ, ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ ಅವರು ಆಯ್ಕೆ ಆಗಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಗಾರ್ ನೇತೃತ್ವದ ಆಯ್ಕೆ ಸಮಿತಿ ಮಲ್ಲೇಪುರಂ ಅವರನ್ನ ಆಯ್ಕೆ ಮಾಡಿದೆ. 7 ಲಕ್ಷದ 1 ರೂಪಾಯಿ ನಗದು ಜೊತೆಗೆ ಪ್ರಶಸ್ತಿ ಫಲಕ ನೀಡಲಿದೆ. ಈ ಪ್ರಶಸ್ತಿಯನ್ನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿದೆ.

ಕನ್ನಡ ಕಾವ್ಯ, ವಿಮರ್ಶೆ, ಆತ್ಮಚರಿತ್ರೆ, ಸಂಶೋಧನ ಗ್ರಂಥ ಸೇರಿದಂತೆ 60ಕ್ಕೂ ಹೆಚ್ಚು ಕೃತಿಗಳನ್ನ ರಚಿಸಿದ್ದಾರೆ. ಜೊತೆಗೆ ಪತ್ರಿಕೆಗಳಿಗೆ ಅಂಕಣಗಳನ್ನ ಬರೆಯುವ ಮೂಲಕ ಅಂಕಣಕಾರರಾಗಿಯೂ ಗುರುತಿಸಿಕೊಂಡಿದ್ದಾರೆ. ನೃಪತುಂಗ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಮಲ್ಲೇಪುರಂ ಅವರ ಶಿಷ್ಯ ಬಳಗ ಸೇರಿದಂತೆ ಅವರ ಬಂಧು ಮಿತ್ರರು ಶುಭ ಕೋರುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!