ಕೆಲವೇ ಕ್ಷಣಗಳಲ್ಲಿ ‘ಪಾದರಾಯನಪುರ ಪುಂಡರು’ ಶಿಫ್ಟ್

296

ರಾಮನಗರ: ಬೆಂಗಳೂರಿನ ಪಾದರಾಯಪುರದಲ್ಲಿ ಗಲಾಟೆಗೆ ಕಾರಣರಾದವನ್ನ ಬಂಧಿಸಲಾಗಿತ್ತು. ಬಳಿಕ ಅವರನ್ನ ರಾಮನಗರದ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇದು ರಾಜಕೀಯ ಸ್ವರೂಪ ಪಡೆದುಕೊಂಡು ಮಾಜಿ ಸಿಎಂ ಹೆಚ್ಡಿಕೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ರಾಜ್ಯ ಸರ್ಕಾರದ ಮುಗಿಬಿದ್ರು. ಇದೀಗ ಕೆಲವೇ ಕ್ಷಣಗಳಲ್ಲಿ ಅವರನ್ನ ಶಿಫ್ಟ್ ಮಾಡಲಾಗ್ತಿದೆ.

ಬೆಂಗಳೂರಿನಿಂದ ಮೊದಲ ಬ್ಯಾಚ್ ನಲ್ಲಿ 42, 2ನೇ ಬ್ಯಾಚ್ ನಲ್ಲಿ 79 ಜನರನ್ನ ಶಿಫ್ಟ್ ಮಾಡಲಾಗಿತ್ತು. ಇದರಲ್ಲಿ ಇಬ್ಬರಿಗೆ ಕರೋನಾ ಇದೆ. ಅವರನ್ನ ಶಿಫ್ಟ್ ಮಾಡದೆ ಹೋದ್ರೆ ಉಗ್ರ ಹೋರಾಟ ಮಾಡುವುದಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ರು. ಹೀಗಾಗಿ ಕಳೆದ ರಾತ್ರಿ ರಾಮನಗರ ಜಿಲ್ಲಾಡಳಿತ ತುರ್ತು ಸಭೆ ನಡೆಸಿತ್ತು.

ಈ ಬಗ್ಗೆ ಇಂದು ಬೆಳಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ತುರ್ತು ಸಭೆ ನಡೆಸಿ, 12 ಬಸ್ ಗಳಲ್ಲಿ ಒಂಒಂದು ಸೀಟಿನಲ್ಲಿ ಒಬ್ಬೊಬ್ಬರಿಗೆ ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಿ, ಬೆಂಗಳೂರಿನ ಹಜ್ ಭವನದಲ್ಲಿ ಇರಿಸಲಾಗುವುದು ಎಂದು ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!