ಪ್ರಜಾಸ್ತ್ರ ಸುದ್ದಿ
ಅಹಮದಾಬಾದ್: ಪ್ರಧಾನಿ ಮೋದಿ ದೇಶದ ಮೊದಲ ಸಮುದ್ರ ವಿಮಾನಯಾನಕ್ಕೆ ಚಾಲನೆ ನೀಡಿದ್ರು. ಗುಜರಾತಿನ ಸಬರ್ ಮತಿ ನದಿಯಿಂದ ಸರ್ದಾರ್ ವಲ್ಲಾಭಾಯ್ ಪಟೇಲ್ ಅವರ ಪ್ರತಿಮೆ ಇರುವ ಸ್ಥಳದವರೆಗೂ ಸಂಪರ್ಕ ಕಲ್ಪಿಸುವ ಮೊದಲ ಸಮುದ್ರ ವಿಮಾನ ಸಂಪರ್ಕವಾಗಿದೆ.
ಸರ್ದಾರ್ ಪಟೇಲ್ ಅವರ 146ನೇ ಜನಮ ದಿನದ ಪ್ರಯುಕ್ತ ಪ್ರಧಾನಿ ಮೋದಿ, ಈ ಸೇವೆಗೆ ಚಾಲನೆ ನೀಡಿದ್ರು. ಸಬರ್ ಮತಿ ನದಿ ತೀರದಿಂದ 10.15ಕ್ಕೆ ಹೊರಡುವ ವಿಮಾನ 10.45ಕ್ಕೆ ಕೆವಾಡಿಯಾ ಸರ್ದಾರ್ ಸರೋವರ ತಲುಪಲಿದೆ. 205 ಕಿಲೋ ಮೀಟರ್ ದೂರವನ್ನ ಕೇವಲ ಅರ್ಧ ಗಂಟೆಯಲ್ಲಿ ತಲುಪಲಿದೆ.
ಈ ವಿಮಾನದಲ್ಲಿ 19 ಆಸನಗಳಿದ್ದು 14 ಜನ ಪ್ರಯಾಣಿಕರಿಗೆ ಅವಕಾಶ ನೀಡಲಾಗ್ತಿದೆ. ಒಬ್ಬರಿಗೆ 4,800 ರೂಪಾಯಿ ದರ ನಿಗದಿ ಮಾಡಲಾಗಿದೆ. ದಿನಕ್ಕೆ 4 ಬಾರಿ ಎರಡು ಮಾರ್ಗದಿಂದ ಸಂಚರಿಸಲಿದೆ. ಈ ಲಘು ವಿಮಾನ ನೀರು ಹಾಗೂ ನೆಲದ ಮೇಲಿಂದ ಹಾರಾಟ ನಡೆಸುತ್ತೆ.