ಪ್ರಜಾಸ್ತ್ರ ‘ರೀಡರ್ಸ್ ಬಾಕ್ಸ್’ಗೆ ದೇವರಹಿಪ್ಪರಗಿಯ ರೈತ ಮೊರ್ಚಾದ ವಿಠಲ ಆರ್ ಯಂಕಚಿ ಅವರು ಬರೆದ ಬರಹ ಇಲ್ಲಿದೆ…
ಹಣ್ಣುಗಳ ಜಿಲ್ಲೆಯೆಂದೆ ಪ್ರಸಿದ್ದಿ ಪಡೆದ ವಿಜಯಪುರ ಹಲವಾರು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿ ಜನರ ಜೀವನ ಅಸ್ಥವ್ಯಸ್ಥವಾಗಿತ್ತು. ಈ ಬಾರಿ ಮಳೆ ಪ್ರಮಾಣ ಹೆಚ್ಚಾಗಿದ್ದು ರೈತರು ಮೊದಲಿನ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮನಸ್ಸು ಮಾಡುತ್ತಿದ್ದಾರೆ. ಪ್ರತಿನಿತ್ಯ ಮಳೆಯಾಗುತ್ತಿರುವುದರಿಂದ ತೊಗರಿˌ ಹತ್ತಿ ನೀರಿನ ಪ್ರಮಾಣ ಹೆಚ್ಚಾಗಿ ಹಳದಿ ಬಣ್ಣಕ್ಕೆ ತಿರುಗಿದರೆ, ಸಜ್ಜಿ ಮತ್ತು ಮೆಕ್ಕೆಜೋಳ ಕೊಯ್ಲಿಗೆ ಬಂದರು ಬಾಯಿಗೆ ಬರದಂತ್ತಾಗಿದೆ.
ಮಳೆ ಗಾಳಿಯಿಂದ ನೆಲಕ್ಕೆ ಬಿದ್ದು ನಾಟಿಗೆ ಒಡೆಯುತ್ತಿವೆ. ಮತ್ತೆ ಕೆಲವು ಕಡೆ ಮನೆಗಳು ಸಹ ಉರುಳಿರುವುದರಿಂದ ಬಡ ರೈತರು ಬೀದಿಗೆ ಬರುವಂತ್ತಾಗಿದೆ. ರೈತರ ಬೆಳೆ ಹಾನಿಯ ಪ್ರಮಾಣದಲ್ಲಿ ಸೂಕ್ತ ಪರಿಹಾರ ನೀಡಲು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತೆನೆ.