ಪ್ರಜಾಸ್ತ್ರ ಸುದ್ದಿ
ನವದೆಹಲಿ: ರೈತರ ಹೋರಾಟದಲ್ಲಿ ಮಧ್ಯಸ್ಥಿಕೆ ವಹಿಸುವ ಸಂಬಂಧ 2 ಕೋಟಿ ಸಹಿ ಸಂಗ್ರಹವನ್ನೊಳಗೊಂಡ ವಿಜ್ಞಾನಪನ ಪತ್ರವನ್ನ, ರಾಷ್ಟ್ರಪತಿಗಳಿಗೆ ಕೊಡಲು ಹೊರಟಾಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ 20 ಜನರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸರ್ಕಾರ ಜನರನ್ನ ಧ್ವನಿಯನ್ನ ಕೇಳಿಸಿಕೊಳ್ಳುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಸರ್ಕಾರ ಲಕ್ಷಾಂತರ ಜನ ರೈತರ ಧ್ವನಿ ಕೇಳಿಸಿಕೊಳ್ಳುವುದಕ್ಕೆ ತಯಾರಿಲ್ಲ. ಹೀಗಾಗಿ ನಾವು ಮೆರವಣಿಗೆ ಮೂಲಕ ರೈತರಿಗೆ ಬೆಂಬಲ ಸೂಚಿಸ್ತಿದ್ದೇವೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.
ಪ್ರಿಯಾಂಕಾ ಸೇರಿದಂತೆ 20 ಜನ ಕಾಂಗ್ರೆಸ್ ನಾಯಕರನ್ನ ಮಂದಿರ ಮಾರ್ಗ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.