ಪ್ರಜಾಸ್ತ್ರ ಸುದ್ದಿ
ನವದೆಹಲಿ: ಮೋದಿ ಉಪನಾಮ ವಿಚಾರಕ್ಕೆ ಸಂಬಂಧಿಸಿದಂತೆ ಗುಜರಾತಿನ ಸೂರತ್ ಕೋರ್ಟ್ ನೀಡಿದ 2 ವರ್ಷದ ಶಿಕ್ಷೆ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಲೋಕಸಭಾ ಸದಸ್ಯತ್ವ ಸ್ಥಾನವನ್ನು ಅನರ್ಹಗೊಳಿಸಲಾಗಿದೆ.
ಶಿಕ್ಷೆ ಪ್ರಕಟವಾದ ದಿನದಿಂದ ಸದಸ್ಯತ್ವ ಸ್ಥಾನವನ್ನು ಅನರ್ಹಗೊಳಿಸಲಾಗಿದೆ. ಇಂದು ಅವರು ಲೋಕಸಭೆ ಸದನಕ್ಕೆ ಬಂದಿದ್ದರು. ಆದರೆ, ಸದನ ಮೂಂದಡಲಾಯಿತು. ಕಳ್ಳರ ಉಪನಾಮ ಯಾಕೆ ಮೋದಿ ಆಗಿರುತ್ತೆ ಎಂದು 2019ರಲ್ಲಿ ಹೇಳಿದ್ದ ರಾಹುಲ್ ಗಾಂಧಿ, ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಎಂದು ಉಲ್ಲೇಖಿಸಿದ್ದರು.
ರಾಹುಲ್ ಹೇಳಿಕೆ ಸಂಬಂಧ ಗುಜರಾತ್ ಮಾಜಿ ಸಚಿವ, ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಸೂರತ್ ಕೋರ್ಟ್, ಮಾರ್ಚ್ 23, ಗುರುವಾರ 2 ವರ್ಷ ಶಿಕ್ಷೆ ವಿಧಿಸಿದೆ. ಮೇಲ್ಮನವಿ ಸಲ್ಲಿಸಲು 30 ದಿನಗಳ ಸಮಯ ನೀಡಿ ಜಾಮೀನು ಮಂಜೂರು ಮಾಡಿದೆ.