‘ಉದ್ದೇಶಪೂರ್ವಕವಾಗಿಯೇ ರಾಹುಲ್ ಅನರ್ಹ ಮಾಡಲಾಗಿದೆ’

174

ಪ್ರಜಾಸ್ತ್ರ ಸುದ್ದಿ

ಮೈಸೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಉದ್ದೇಶಪೂರ್ವಕವಾಗಿಯೇ ಅವರ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದು ಎಂಎಲ್ಸಿ ಎಚ್.ವಿಶ್ವನಾಥ್ ಹೇಳಿದ್ದಾರೆ. ಬಿಜೆಪಿ ಸಾಮಾಜಿಕ ತಾಣಗಳು ಪಪ್ಪು, ಬುದ್ಧಿಗೇಡಿ ಅಂತೆಲ್ಲ ಗೇಲಿ ಮಾಡಿದ್ದರು. ಇದಕ್ಕೆ ಭಾರತ್ ಜೋಡೋ ಯಾತ್ರೆ ಮೂಲಕ ತಿರುಗೇಟು ನೀಡಿದರು.

ಲಂಡನ್ ನಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದರು. ಸಂಸತ್ ನಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ. ಸ್ಪೀಕರ್ ಸಹ ಸಹಕಾರ ನೀಡಲಿಲ್ಲ. ತಮಗೆ ಬೇಕಾದ ನ್ಯಾಯಾಧೀಶರು ಇರುವ ಕಡೆ ಕೇಸ್ ದಾಖಲಿಸಿದರು. ವಿರೋಧ ಪಕ್ಷ, ನಾಯಕರನ್ನು ದಮನ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸಂಸತ್ತಿನಲ್ಲಿ ಶೇಕಡ 54ರಷ್ಟು ಸದಸ್ಯರು ಕ್ರಮಿನಲ್ ಹಿನ್ನಲೆ ಹೊಂದಿದ್ದಾರೆ. ಸಂಸದೀಯ ಮಂಡಳಿ ಅವರನ್ನೆಲ್ಲ ಅನರ್ಹಗೊಳಿಸಬೇಕು. ರಾಹುಲ್ ಗಾಂಧಿ ಅನರ್ಹತೆಗೆ ತೋರಿಸಿದ ಆಸಕ್ತಿ ಶೇಕಡ 54ರಷ್ಟು ಸದಸ್ಯರಿಗೂ ತೋರಿಸಲಿ ಎಂದು ಸವಾಲ್ ಹಾಕಿದರು.




Leave a Reply

Your email address will not be published. Required fields are marked *

error: Content is protected !!