ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿನ ಒಳ ಜಗಳ ಇದೀಗ ಮೂರನೇ ವ್ಯಕ್ತಿಗೆ ಲಾಭವಾಗಿದೆ. ರಮೇಶ ಕತ್ತಿ, ಪ್ರಭಾಕರ ಕೋರೆ, ಪ್ರಕಾಶ ಶೆಟ್ಟಿ ಅವರ ಹೆಸರನ್ನ ರಾಜ್ಯ ಸರ್ಕಾರ ಪ್ರಸ್ತಾವನೆ ಮಾಡಿತ್ತು. ಆದ್ರೆ, ಬಿಜೆಪಿ ಹೈಕಮಂಡ್ ಬೇರೆ ಹೆಸರಗಳನ್ನ ಸೂಚಿಸಿದೆ.
ಈರಣ್ಣ ಕಡಾಡಿ, ಅಶೋಕ ಗಸ್ತಿ ಅವರಿಗೆ ಟಿಕೆಟ್ ನೀಡಲಾಗಿದೆ. ರಾಯಚೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಗಸ್ತಿ, ಸವಿತಾ ಸಮಾಜಕ್ಕೆ ಸೇರಿದವರು. ಇನ್ನು ಈರಣ್ಣ ಕಡಾಡಿ ಲಿಂಗಾಯತರಾಗಿದ್ದಾರೆ. ಇವರಿಬ್ಬರ ಹೆಸರನ್ನ ಬಿಜೆಪಿ ಹೈಕಮಾಂಡ್ ಈ ಇಬ್ಬರು ಹೆಸರುಗಳನ್ನ ಅನೌನ್ಸ್ ಮಾಡಿದೆ.