ಪ್ರಜಾಸ್ತ್ರ ಸುದ್ದಿ
ನವದೆಹಲಿ: ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮ ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯುತ್ತಿದೆ. ಇದಕ್ಕೆ 200 ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಅದರಲ್ಲಿ ಉಮ ಭಾರತಿ ಸಹ ಒಬ್ಬರು. ಆದ್ರೂ ಅವರು ಕಾರ್ಯಕ್ರದಿಂದ ದೂರ ಉಳಿವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂದು ಸಂಜೆ ಭೂಪಾಲ್ ನಿಂದ ಹೊರಟು ನಾಳೆ ಅಯೋಧ್ಯೆ ತಲುಪುತ್ತೇನೆ. ಆದ್ರೆ, ಕಾರ್ಯಕ್ರಮದಲ್ಲಿ ಭಾಗಿಯಾಗದೆ ಟಿವಿಯಲ್ಲಿ ವೀಕ್ಷಣೆ ಮಾಡುತ್ತೇನೆ ಎಂದಿದ್ದಾರೆ. ಕಾರಣ, ಕರೋನಾ ಸೋಂಕಿನ ಸಲುವಾಗಿ ದೂರ ಇರುವುದಾಗಿ ಹೇಳಿದ್ದು, ಪ್ರಧಾನಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂದಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಂಬಂಧ ದೇಶದಲ್ಲಿ ನಡೆದ ದೊಡ್ಡ ಯಾತ್ರೆ ಸೇರಿದಂತೆ ಬಾಬರಿ ಮಸೀದಿ ಕೊಡವಿದ ಪ್ರಕರಣದಲ್ಲಿ ಉಮಾ ಭಾರತಿ ಸಹ ಇದ್ದಾರೆ. ಇದೀಗ ಕಾರ್ಯಕ್ರಮದಿಂದ ದೂರ ಉಳಿಯುತ್ತಿರುವುದು ಹಲವು ಅನುಮಾನಗಳನ್ನ ಮೂಡಿಸಿದೆ.