ಪ್ರಜಾಸ್ತ್ರ ಸುದ್ದಿ
ಮುಂಬೈ: ಡಿಸೆಂಬರ್ 30ರ ಮುಂಜಾನೆ ಕಾರ್ ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಇಂಡಿಯನ್ ಕ್ರಿಕೆಟ್ ಟೀಂ ವಿಕೆಟ್ ಕೀಪರ್ ರಿಷಬ್ ಪಂಥ್ ಅವರನ್ನು ಡೆಹ್ರಾಡೋನ್ ನಿಂದ ಮುಂಬೈಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
ಹೆಚ್ಚುವರಿ ಚಿಕಿತ್ಸೆಗಾಗಿ ಡೆಹ್ರಾಡೋನ್ ಮ್ಯಾಕ್ಸ್ ಆಸ್ಪತ್ರೆಯಿಂದ ಮುಂಬೈನ ಧಿರುಬಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಏರ್ ಲಿಫ್ಟ್ ಮೂಲಕ ದಾಖಲಿಸಲಾಗಿದೆ. ಕೇಂದ್ರದ ಮುಖ್ಯಸ್ಥರಾದ ಪರ್ದಿವಾಲಾ ನಿಗಾ ವಹಿಸಿದ್ದಾರೆ. ರಿಷಬ್ ಗೆ ಆಪರೇಷನ್ ನಡೆಸಲಾಗುತ್ತೆ ಹಾಗೂ ಕಣ್ಣಿನ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡವು ಅವರ ಮೇಲ್ವಿಚಾರಣೆ ನಡೆಸಲಿದೆ ಎಂದು ತಿಳಿಸಿದ್ದಾರೆ.