ಪ್ರಜಾಸ್ತ್ರ ಸುದ್ದಿ
ನವದೆಹಲಿ: ಬಿಜೆಪಿಯ ನುಪೂರ್ ಶರ್ಮಾ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿ ಕಾರಿದ ಬೆನ್ನೆಲ್ಲೇ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ಬರೀ ನುಪೂರ್ ಶರ್ಮಾದಿಂದ ದೇಶಕ್ಕೆ ಧಕ್ಕೆ ಬಂದಿಲ್ಲ. ದ್ವೇಷ, ಸಿಟ್ಟು ವಾತಾವರಣ ನಿರ್ಮಾಣ ಮಾಡಿದ ಕೇಂದ್ರ ಸರ್ಕಾರದಿಂದ ದೇಶಕ್ಕೆ ಧಕ್ಕೆಯಾಗಿದೆ ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಅನಿಸಿಕೆಗೆ ಸಹಮತ ಇದೆ. ಸುಪ್ರೀಂ ಕೋರ್ಟ್ ಹೇಳಿದ್ದು ಸರಿಯಾಗಿದೆ. ಕೇಂದ್ರದ ಎನ್ ಡಿಎ ಸರ್ಕಾರದಿಂದ ಇಂತಹ ಪರಿಸ್ಥಿತಿ ಬಂದಿದೆ. ಯಾರೆ ಈ ರೀತಿಯ ಕೆಲಸ ಮಾಡಲಿ ಅದು ದೇಶಕ್ಕೆ ದ್ರೋಹ ಬಗೆದಂತೆ ಆಗುತ್ತೆ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ, ಕೇಂದ್ರ ಗೃಹ ಮಂತ್ರಿ, ಬಿಜೆಪಿ, ಆರ್ ಎಸ್ಎಸ್ ಕೋಪ, ದ್ವೇಷದ ವಾತಾವರಣ ನಿರ್ಮಿಸಿದೆ. ಇದು ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ. ಕಾಂಗ್ರೆಸ್ ಒಗ್ಗೂಡಿಸುತ್ತದೆ. ಬಿಜೆಪಿ ವಿಭಜಿಸುತ್ತಿದೆ ಎಂದು ಕಿಡಿ ಕಾರಿದರು.