ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಮತ್ತೆ ತಾರಕ್ಕೇರಿದೆ. ದಕ್ಷಿಣ ಉಕ್ರೇನ್ ಭಾಗದಲ್ಲಿನ ಪ್ರಮುಖ ಆಣೆಕಟ್ಟೆಯೊಂದನ್ನು ರಷ್ಯಾ ಸ್ಫೋಟಿಸಿದೆ ಎಂದು ಉಕ್ರೇನ್ ಅಧಿಕಾರಿಗಳು ಆರೋಪಿಸಿದ್ದಾರೆ. ಹೀಗಾಗಿ ಡ್ನೀಪರ್ ನದಿ ದ್ವೀಪದಲ್ಲಿನ ಜನರುನ್ನು ಸ್ಥಳಾಂತರಿಸುವ ಕೆಲಸ ನಡೆದಿದೆ.
ನೋವಾ ಕಾಖೋವ್ಕಾ ನಗರ ಜಲಾವೃತಗೊಂಡಿದೆಯಂತೆ. 16 ಸಾವಿರ ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆಣೆಕಟ್ಟು ಸ್ಫೋಟದಿಂದಾಗಿ ಪ್ರವಾಹ ಸೃಷ್ಟಿಯಾಗಿದ್ದು, ಇದೊಂದು ಪರಿಸರ ಹತ್ಯಾಕಾಂಡ ಎಂದು ಉಕ್ರೇನ್ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಣೆಕಟ್ಟು ನಾಶ, ಪರಿಸರ ಹಾಗೂ ಮಾನವ ಕುಲಕ್ಕೆ ದೊಡ್ಡ ಅಮಾನವೀಯ ದುರಂತವಾಗಿದೆ. ವಿಶ್ವಸಂಸ್ಥೆ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಹೇಳಲಾಗುತ್ತಿದೆ. ಆದರೆ, ಇದನ್ನು ರಷ್ಯಾ ಅಧಿಕಾರಿಗಳು ತಳ್ಳಿ ಹಾಕಿದ್ದು, ಇದಕ್ಕೆ ಉಕ್ರೇನ್ ಹೊಣೆ. ತನ್ನ ವಿಧ್ವಂಸಕ ಕೃತ್ಯಗಳಿಂದ ಜನರ ದೃಷ್ಟಿ ಬೇರೆ ಕಡೆ ಮಾಡಲು ಈ ರೀತಿ ಮಾಡಿದೆ ಎಂದು ಆರೋಪಿಸಿದೆ. ಒಟ್ಟಿನಲ್ಲಿ ಆಣೆಕಟ್ಟು ಸ್ಫೋಟ ಸಾವಿರ ಜನರ ಬದುಕು ಕಸಿದುಕೊಂಡಿದೆ.