ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದ ಕಲ್ಯಾಣನಗರದಲ್ಲಿರುವ ಬಸವ ಮಂಟಪದಲ್ಲಿ ಬಸವ ಧರ್ಮಪೀಠದ ಪ್ರಥಮ ಮಹಿಳಾ ಜಗದ್ಗುರುಗಳಾದ ಲಿಂಗೈಕ್ಯ ಶ್ರೀ ಮಾತೆ ಮಹಾದೇವಿ ಅವರ 77ನೇ ಜಯಂತಿಯನ್ನು ಸೋಮವಾರ ಸಂಜೆ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಬಸವದಳದ ಶಿವಕುಮಾರ ಶಿವಸಿಂಪಿ, ಮಾತಾಜಿಯವರು ಬಸವ ಧರ್ಮಪೀಠ, ರಾಷ್ಟ್ರೀಯ ಬಸವದಳ, ಅಕ್ಕಮಹಾದೇವಿ ಮಹಿಳಾಪೀಠ, ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸ್ಥಾಪನೆ ಮಾಡಿದರು. ಈ ಮೂಲಕ ಬಸವಾದಿಶರಣರ ಚಿಂತನೆಗಳನ್ನು ಪಸರಿಸುವ ಕಾಯಕ ಮಾಡಿದರು ಅಂತಾ ಹೇಳಿದರು.
ಶಿವಾನಂದ ಕಲಬುರ್ಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಾನಪ್ಪ ಜೋಗೂರ, ಆರ್.ಆರ್ ಪಾಟೀಲ, ಸಿದ್ದ ಬಸವ ಕುಂಬಾರ, ಗುರು ಬಸರಕೋಡ, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಜಗದೀಶ ಕಲಬುರ್ಗಿ, ಶಿವಾನಂದ ಗೋಣಿ, ಎಂ.ಜಿ ತಳವಾರ, ಭೀಮಾಶಂಕರ ಪತ್ತಾರ, ಜಯಶ್ರೀ ಹೂಗಾರ, ಮೇಘಾ ಗೋಣಿ ಸೇರಿ ಅನೇಕರು ಉಪಸ್ಥಿತರಿದ್ದರು. ಸಂಗಣ್ಣ ಬ್ಯಾಕೋಡ ಸ್ವಾಗತಿಸಿದರು.