ಪ್ರಜಾಸ್ತ್ರ ಕ್ರೀಡಾ ಸುದ್ದಿ
ಟಿ-20 ವಿಶ್ವಕಪ್ ಆಡಲು ಈಗಾಗಲೇ ಟೀಂ ಇಂಡಿಯಾ ಆಸ್ಟ್ರೇಲಿಯಾ ತೆರಳಿ ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ. 11 ಆಟಗಾರರ ತಂಡದಲ್ಲಿ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದ ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್ ಗೆ ಶಾಕ್ ನೀಡಿತು. 14ರ ತಂಡದಲ್ಲಿಯೂ ಆಯ್ಕೆ ಮಾಡದೆ ಮೀಸಲು ಆಟಗಾರರನ್ನಾಗಿ ಸೇರಿಸಿಕೊಂಡಿತು.
ಮೀಸಲು ಆಟಗಾರರ ಲಿಸ್ಟ್ ನಲ್ಲಿ ಮೊಹಮ್ಮದ್ ಶೆಮಿ, ಸಿರಾಜ್ ಸಹ ಇದ್ದಾರೆ. ಗುರುವಾರ ಶೆಮಿ ಹಾಗೂ ಸಿರಾಜ್ ಮಾತ್ರ ಆಸ್ಟ್ರೇಲಿಯಾಗೆ ಹೋಗಿದ್ದಾರೆ. ಬಿಸಿಸಿಐ ಮತ್ತೆ ನೀಡಿದ ಶಾಕ್ ನಿಂದಾಗಿ ಅಯ್ಯರ್, ಬಿಷ್ಣೋಯ್ ಆಸೀಸ್ ಫ್ಲೈಟ್ ಹತ್ತದೆ ಇಲ್ಲಿಯೇ ಉಳಿದಿಕೊಂಡಿದ್ದಾರೆ.
ಹೌದು, ಸೈಯ್ಯದ್ ಮುಸ್ತಾಕ್ ಅಲಿ ಟೂರ್ನಿಯಲ್ಲಿ ತಮ್ಮ ತಮ್ಮ ರಾಜ್ಯವನ್ನು ಪ್ರತಿನಿಧಿಸಲು ಈ ಇಬ್ಬರು ಆಟಗಾರರಿಗೆ ಬಿಸಿಸಿಐ ಸೂಚಿಸಿದೆ. ಹೀಗಾಗಿ ಟಿ-20 ವಿಶ್ವಕಪ್ ನಲ್ಲಿ ಆಡಬೇಕು ಅನ್ನೋ ಈ ಇಬ್ಬರು ಆಟಗಾರರ ಆಸೆ ಈ ಬಾರಿ ಈಡೇರುವುದು ಕಷ್ಟ.