ಸಿದ್ದೇಶ್ವರ ಶ್ರೀಗಳ ಚಿತಾಭಸ್ಮ ವಿಸರ್ಜನೆ

204

ಪ್ರಜಾಸ್ತ್ರ ಸುದ್ದಿ

ಬಾಗಲಕೋಟೆ: ನಡೆದಾಡುವ ದೇವರು ಲಿಂ. ಸಿದ್ಧೇಶ್ವರ ಶ್ರೀಗಳ ಚಿತಾಭಸ್ಮವನ್ನು ಬಾಗಲಕೋಟಯ ಕೂಡಲಸಂಗಮದ ತ್ರಿವೇಣಿ ಸಂಗಮದಲ್ಲಿ ವಿಸರ್ಜನೆ ಮಾಡಲಾಯಿತು. ವಿಜಯಪುರ ಜ್ಞಾನ ಯೋಗಾಶ್ರಮದಿಂದ ಚಿತಾಭಸ್ಮದೊಂದಿಗೆ ಹೊರಟ ಮಠಾಧೀಶರು, ಭಕ್ತರು ತುಂಬಿದ ವಾಹನಗಳು ಬೆಳಗ್ಗೆ ಕೂಡಲ ಸಂಗಮ ತಲುಪಿದವು.

ಕೂಡಲ ಸಂಗಮದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹಲವು ಪೂಜ್ಯರು ನದಿ ದಂಡೆಯಲ್ಲಿ ವಿಶೇಷ ತಯಾರಿ ಮಾಡಿಕೊಂಡು
ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಪ್ರಮುಖ ಮಠಾಧೀಶರು ಬೋಟ್‌ ಮೂಲಕ ತ್ರಿವೇಣಿ ಸಂಘಮದತ್ತ ತೆರಳಿ ನದಿಯಲ್ಲಿ ಚಿತಾಭಸ್ಮ ವಿಸರ್ಜಿಸಿ ಭಕ್ತಿ ಭಾವದಿಂದ ಕೈ ಮುಗಿದರು. ಈ ಮೂಲಕ ಸಿದ್ಧೇಶ್ವರ ಶ್ರೀಗಳ ಆಶಯ ಈಡೇರಿಸಲಾಯಿತು.




Leave a Reply

Your email address will not be published. Required fields are marked *

error: Content is protected !!