ಪ್ರಜಾಸ್ತ್ರ ಸುದ್ದಿ
ಸಿಂದಗಿ: ವಿಧಾನಸಭೆ ಉಪ ಚುನಾವಣೆಯ ಸಂಬಂಧ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಉಸ್ತುವಾರಿ ಲಕ್ಷ್ಮಣ ಸವದಿ ಸೇರಿದಂತೆ ಹಲವು ನಾಯಕರು ಪ್ರಣಾಳಿಕೆ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಸವದಿ, ಭಾನುವಾರದಿಂದ ಮಹಾಸಂಪರ್ಕ ಅಭಿಯಾನ ನಡೆಸಲಾಗುವುದು. ಈ ಮೂಲಕ 271 ಬೂತ್ ಮಟ್ಟದ ಮತದಾರರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಾಗುವುದು ಎಂದರು. ಅಕ್ಟೋಬರ್ 24ರಂದು ಮುಖ್ಯಮಂತ್ರಿ ಬೊಮ್ಮಾಯಿ ತಾಲೂಕಿನ 12 ಹಳ್ಳಿಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಕನ್ನೊಳ್ಳಿ, ಕೊಕಟನೂರ, ಹಂದಿಗನೂರ, ಗುಬ್ಬೇವಾಡ, ಬನ್ನಹಟ್ಟಿ, ಬ್ಯಾಕೋಡ ಭೇಟಿಯ ಬಳಿಕ ಸಿಂದಗಿಗೆ ಬರಲಿದ್ದಾರೆ.
ಮಧ್ಯಾಹ್ನದ ನಂತರ ಮೊರಟಗಿ, ಕಕ್ಕಳಮೇಲಿ, ಮಲಘಾಣ, ದೇವರನಾವದಗಿ, ಬಮ್ಮನಹಳ್ಳಿ ಹಾಗೂ ದೇವಣಗಾಂವದಲ್ಲಿ ಪ್ರಚಾರ ಮಾಡಲಿದ್ದಾರೆ ಅಂತಾ ಹೇಳಿದರು. ಈ ವೇಳೆ ಕೊಳ್ಳೇಗಾಲ ಶಾಸಕ ಎನ್.ಮಹೇಶ, ಸಂಸದ ರಮೇಶ ಜಿಗಜಿಣಗಿ, ಎಂಎಲ್ಸಿ ಅರುಣ ಶಹಾಪೂರ, ಅಪ್ಪುಸಾಹಬಣ್ಣ ಪಟ್ಟಣಶೆಟ್ಟಿ, ಅಶೋಕ ಅಲ್ಲಾಪೂರ ಸೇರಿದಂತೆ ಇತರರು ಭಾಗವಹಿಸಿದ್ದರು.