ಪ್ರಜಾಸ್ತ್ರ ಎಕ್ಸ್ ಕ್ಲೂಸೀವ್ ಸ್ಟೋರಿ
ವಿಜಯಪುರ: ಸೋಲಾಪುರದ ಉಜನಿ ಆಣೆಕಟ್ಟೆಯಿಂದ ಭೀಮಾ ನದಿಗೆ ಬರೋಬ್ಬರಿ 36 ಸಾವಿರ ಕ್ಯೂಸೆಕ್ ನೀರು ಹರಿ ಬಿಡಲಾಗಿದೆ. ಇದು ಶಿರಡೋನಾ ಮೂಲಕ ಇಂಡಿ ತಾಲೂಕು ಪ್ರವೇಶಿಸುತ್ತೆ. ಅಲ್ಲಿಂದ ಸಿಂದಗಿ ತಾಲೂಕು ಮೂಲಕ ಅಫ್ಜಲಪುರದ ಸೊನ್ನ ಬ್ಯಾರೇಜ್ ತಲುಪಲಿದೆ.
ಹೀಗೆ ಉಜನಿ ಆಣಕಟ್ಟೆಯಿಂದ ಸೊನ್ನ ಬ್ಯಾರೇಜ್ ಗೆ ತಲುಪುವ ಮಧ್ಯ ಬರುವ ಇಂಡಿ ಹಾಗೂ ಸಿಂದಗಿಯ 14 ಹಳ್ಳಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲೆಡೆ ಭರ್ಜರಿಯಾಗಿ ಮಳೆಯಾಗ್ತಿದೆ. ಅದೇ ರೀತಿ ಜಿಲ್ಲೆಯಲ್ಲಿ ಸಹ ಭರ್ಜರಿ ಮಳೆಯಾಗ್ತಿದೆ. ಹೀಗಾಗಿ ಭೀಮಾ ನದಿಯಲ್ಲಿ 1 ಲಕ್ಷ ಕ್ಯೂಸೆಕ್ ನೀರಿನೊಂದಿಗೆ ಹರಿಯುತ್ತಿದೆ.
ಇನ್ನು ಸೊನ್ನ ಬ್ಯಾರೇಜ್ ನೀರು ಶೇಖರಣೆ ಪ್ರಮಾಣ 3.166 ಟಿಎಂಸಿ ಇದೆ. ಅದು ಇಂದು ಕಂಪ್ಲೀಟ್ ಆಗಿದೆ. ಹೀಗಾಗಿ ಇಂದು 1,05,000 ಕ್ಯೂಸೆಕ್ ನೀರನ್ನ ಹೊರ ಬಿಡಲಾಗಿದೆ. ಹೀಗಾಗಿ ಭೀಮಾ ನದಿಯ ಒಳಹರಿವು ಹೆಚ್ಚಾಗಿದೆ. ಇದರ ಪರಿಣಾಮ ಇಂಡಿ ಹಾಗೂ ಸಿಂದಗಿಯ 14 ಹಳ್ಳಿಗಳ ಮೇಲಾಗುವ ಸಾಧ್ಯತೆಯಿದೆ. ಹೀಗಾಗಿ ಭೀಮಾ ನದಿ ಪಾತ್ರದ ಹಳ್ಳಿಗಳ ಜನರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
ಇದರ ಜೊತೆಗೆ ಸೊನ್ನ ಬ್ಯಾರೇಜ್ ನ ಹೊರ ಹರಿವಿನಿಂದಾಗಿ ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗೆ ಒಂದಿಷ್ಟು ಸಮಸ್ಯೆ ಎದುರಾಗಬಹುದು.