ಬಾಗಲಕೋಟೆ: ‘ಕಾಮಾತುರಂ ನಾ ಲಜ್ಜಂ.. ನಾ ಭಯಂ’ ಅನ್ನೋ ಮಾತಿದೆ. ಈ ಮಾತಿಗೆ ಇಲ್ಲೊಬ್ಬ ನೀಚ ಶಿಕ್ಷಕ ಹೇಳಿ ಮಾಡಿಸಿದ್ದಂತೆ ಇದ್ದಾನೆ. ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು, ವಿದ್ಯಾರ್ಥಿಯನ್ನ ಬಳಸಿಕೊಳ್ಳಲು ನೋಡಿದ್ದಾನೆ. ಆತನ ನೀಚ ಕಾರ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಬಾಗಲಕೋಟೆಯ ಶಾಲೆಯೊಂದರ ಶಿಕ್ಷಕ ಹೆಚ್.ಆರ್ ರಮೇಶ್ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ತನ್ನ ಕೊಠಡಿಯಲ್ಲಿ ವಿದ್ಯಾರ್ಥಿನಿಯನ್ನ ಲೈಂಗಿಕ ಪ್ರಚೋದನೆ ಕಾರ್ಯಕ್ಕೆ ಬಳಸಿಕೊಂಡಿದ್ದಾನೆ. ಅದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇದ್ರಿಂದಾಗಿ ಇಡೀ ಬಾಗಲಕೋಟೆಯ ಜನ ಬೆಚ್ಚಿಬಿದ್ದಿದ್ದಾರೆ. ಇನ್ಮುಂದೆ ಮಕ್ಕಳಿಗೆ ಶಾಲೆಗೆ ಕಳಿಸೋದು ಹೇಗೆ ಅಂತಿದ್ದಾರೆ.
ಹಾಸನದ ಕಾಲೇಜೊಂದರ ಪ್ರಿನ್ಸಿಪಾಲ್, ವಿದ್ಯಾರ್ಥಿಗಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗಿ, ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ ಮರೆಯುವ ಮುನ್ನವೇ ಈ ಘಟನೆ ನಡೆದಿದೆ.
‘ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ.. ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ’ ಅನ್ನೋ ಕಾಲವೊಂದು ಇತ್ತು. ಇದೀಗ ಆ ಕಾಲ ಬದಲಾಗಿದೆ. ಕೆಲ ನೀಚ ಶಿಕ್ಷಕರು ತಮ್ಮ ಬಯಕೆಗಳನ್ನ ತೀರಿಸಿಕೊಳ್ಳಲು, ಕಂಡವರ ಮನೆ ಮಕ್ಕಳನ್ನ ಬಳಿಸಿಕೊಳ್ತಿದ್ದಾರೆ. ಗುರುವಿನ ಸ್ಥಾನವನ್ನು ಮರೆತು ನಡೆದುಕೊಳ್ತಿರೋದು ನಿಜಕ್ಕೂ ಆತಂಕದ ಸಂಗತಿ.