ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಎಸ್ಎಸ್ಎಲ್ ಸಿ ಫಲಿತಾಂಶ ಇಂದು ಪ್ರಕಟಗೊಂಡಿದೆ. ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಫಲಿತಾಂಶ ಪ್ರಕಟಿಸಿದ್ದು, 145 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. ಶೇಕಡ 81.30ರಷ್ಟು ವಿದ್ಯಾರ್ಥಿಗಳು, ಶೇಕಡ 90.29 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ.
ವಿಜಯಪುರ ಜಿಲ್ಲೆಯ ಅಮಿತ್ ಮಾದರ, ಐಶ್ವರ್ಯ ಕನಸೆ, ತುಮಕೂರು ಜಿಲ್ಲೆಯ ಬಿ.ಆರ್ ಭೂಮಿಕಾ, ಹಾವೇರಿಯ ಪ್ರವೀಣ ನೀರಲಗಿ, ಬೆಳಗಾವಿಯ ಸಹನಾ ರಾಯರ್, ಉಡುಪಿಯ ಗಾಯತ್ರಿ, ಬೆಂಗಳೂರಿನ ಅನಘಾ ಎಂ. ಮೂರ್ತಿ ಚಿಕ್ಕಮಗಳೂರಿನ ಎಸ್.ಎಸ್ ಆಕೃತಿ ಸೇರಿದಂತೆ 145 ವಿದ್ಯಾರ್ಥಿಗಳು 100ಕ್ಕೆ 100ರಷ್ಟು ಅಂಕ ಪಡೆದಿದ್ದಾರೆ.