ಸುಡುತಿದೆ ನೆತ್ತಿ.. ಬಂದಿದೆ ಕಲ್ಲಂಗಡಿ..

216

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಬೇಸಿಗೆ ಶುರುವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಸೂರ್ಯನ ತಾಪ ಜೋರಾಗಿದೆ. ಅದರಲ್ಲೂ ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್ ಭಾಗದ ಬಿಸಿಲು ಅನುಭವಿಸಿದವರಿಗೆ ಗೊತ್ತು. ಬೇಸಿಗೆ ಬಂದರೆ ತಂಪು ಪಾನೀಯಗಳ ಜೊತೆಗೆ ಕಲ್ಲಂಗಡಿ ಹಣ್ಣಿನ ಭರಾಟೆ ಜೋರು.

ಇದೀಗ ಜಿಲ್ಲೆಯಾದ್ಯಂತ ಕಲ್ಲಂಗಡಿ ಹಣ್ಣಿನ ವ್ಯಾಪಾರ ಭರ್ಜರಿಯಾಗಿದೆ. 40 ರೂಪಾಯಿಯಿಂದ 100 ರೂಪಾಯಿ ತನಕ ಕಲ್ಲಂಗಡಿ ಮಾರಾಟವಾಗುತ್ತಿದೆ. ಏಪ್ರಿಲ್, ಮೇ ತಿಂಗಳಲ್ಲಿ ಇನ್ನು ಬೆಲೆ ಹೆಚ್ಚಾಗುತ್ತೆ. ಎಳೆನೀರು ಸಹ 40 ರೂಪಾಯಿ ಇದೆ. ಒಟ್ಟಿನಲ್ಲಿ ಬೇಸಿಗೆಯಲ್ಲಿ ಕಲ್ಲಂಗಡಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತೆ.




Leave a Reply

Your email address will not be published. Required fields are marked *

error: Content is protected !!