ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟಿ ಹಾಗೂ ರಾಜಕಾರಣಿ ರಮ್ಯಾ ಬಹು ವರ್ಷಗಳ ಬಳಿಕ ಸಿನಿರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ನಟನೆಯ ಜೊತೆಗೆ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಆಪಲ್ ಬಾಕ್ಸ್ ನಿರ್ಮಾಣ ಸಂಸ್ಥೆಯ ಮೂಲಕ ‘ಸ್ವಾತಿಮುತ್ತಿನ ಮಳೆ ಹನಿಯೆ’ ಅನ್ನೋ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ.
ಹಿರಿಯ ನಿರ್ದೇಶಕ ಎಸ್.ವಿ ರಾಜೇಂದ್ರಸಿಂಗ್ ಬಾಬು ಅವರು, ಸ್ವಾತಿಮತ್ತಿನ ಮಳೆ ಹನಿಯೆ ಶೀರ್ಷಿಕೆ ನನಗೆ ಸೇರಬೇಕಾದುದ್ದು. ಕೆಲವು ವರ್ಷಗಳ ಹಿಂದೆ ಅಂಬರೀಶ್ ಅಭಿಯನದೊಂದಿಗೆ ಸಿನಿಮಾ ಶುರು ಮಾಡಿದ್ದೆ. ಓಬೇರಾಯ್ ಹೋಟೆಲ್ ನಲ್ಲಿ ಸಿನಿಮಾ ಸೆಟ್ಟೇರಿತ್ತು. ಡಾ.ರಾಜಕುಮಾರ್ ಕ್ಲಾಪ್ ಮಾಡಿದ್ದರು. ಅಂಬಿ ನಿಧನದ ಬಳಿಕ ಚಿತ್ರ ನಿಂತಿತು ಎಂದು ಗುರುವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಅವರು ಕೋರ್ಟಿಗೆ ಹೋಗಿದ್ದರು ಅಲ್ಲಿ ಅವರಿಗೆ ಜಯ ಸಿಕ್ಕಿದೆ.
ಟೈಟಲ್ ಸಂಬಂಧ ವಾಣಿಜ್ಯ ಮಂಡಳಿ, ಸೆನ್ಸಾರ್ ಮಂಡಳಿಯವರಿಗೂ ನಾವು ನೋಟಿಸ್ ನೀಡಿದ್ದೇವು. ಅದು ನನ್ನ ಸಿನಿಮಾದ ಸಾಹಿತ್ಯದ ಸಾಲಾಗಿದೆ. ಈ ಸಂಬಂಧ ಕೋರ್ಟಿಗೆ ಹೋಗಿದ್ದೆ. ಜಯ ಸಿಕ್ಕಿದೆ. ನ್ಯಾಯಾಲಯದಿಂದ ಆರ್ಡರ್ ಆಗಿದೆ. ಆ ಹೆಸರು ಯಾರೂ ಬಳಸುವಂತಿಲ್ಲ. ಇದು ಕಾಪಿರೈಟ್ ಉಲ್ಲಂಘನೆಯಾಗುತ್ತದೆ ಎಂದಿದ್ದಾರೆ. ಹೀಗಾಗಿ ನಟಿ ರಮ್ಯಾ ಮೊದಲ ನಿರ್ಮಾಣದ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ ಎನ್ನಬಹುದು.