ಪ್ರಜಾಸ್ತ್ರ ಸುದ್ದಿ
ಜೈಪುರ: ಆಗ್ರಾದಲ್ಲಿರುವ ವಿಶ್ವ ವಿಖ್ಯಾತ ತಾಜ್ ಮಹಲ್ ಇರವ ಜಾಗ ಜೈಪುರ ರಾಜ ಮನೆತನಕ್ಕೆ ಸೇರಿದ್ದು ಎಂದು ಬಿಜೆಪಿ ಸಂಸದೆ ದಿಯಾ ಕುಮಾರಿ ಹೇಳಿದ್ದಾರೆ. ಜೈಪುರ ರಾಜ ಜೈಸಿಂಗ್ ದೊರೆ ಅವರಿಗೆ ಸೇರಿದ್ದು, ಅದಕ್ಕೆ ಬೇಕಾದ ದಾಖಲೆಗಳಿವೆ ಎಂದಿದ್ದಾರೆ.
ತಾಜ್ ಮಹಲ್ ಸತ್ಯಾಸತ್ಯೆ ಹೊರಬರಬೇಕು ಅಂದರೆ ಇದರ ತನಿಖೆಯಾಗಬೇಕು. ಮುಚ್ಚಿದ 22 ಕೊಠಡಿಗಳ ಕುರಿತು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ. ಸ್ಮಾರಕ ನಿರ್ಮಾಣಕ್ಕೂ ಮೊದಲು ಈ ಜಾಗದಲ್ಲಿ ಏನಿತ್ತು ಅನ್ನೋದರ ತನಿಖೆಯಾಗಬೇಕು ಎಂದಿದ್ದಾರೆ.
ಜೈಪುರ ದೊರೆಯಾಗಿದ್ದ ಜೈಸಿಂಗ್ ಮನೆತನದವರಾದ ಬಿಜೆಪಿ ಸಂಸದೆ ದಿಯಾ ಕುಮಾರಿ, ಭೂಮಿಗೆ ಬದಲಾಗಿ ಪರಿಹಾರ ನೀಡಲಾಗಿದೆ. ಎಷ್ಟು ಕೊಟ್ಟಿದ್ದಾರೆ ಅನ್ನೋದು ಹೇಳಲು ಸಾಧ್ಯವಿಲ್ಲ. ತಾಜ್ ಮಹಲ್ ಇರುವ ಜಾಗ ನಮ್ಮ ಕುಟುಂಬಕ್ಕೆ ಸೇರಿದೆ. ಇದನ್ನು ಶಹಜಹಾನ್ ವಶಪಡಿಸಿಕೊಂಡಿರುವುದು ನಿಜ ಅಂತಾ ಹೇಳುತ್ತಿದ್ದಾರೆ.