ಉತ್ತರ ಪ್ರದೇಶ: ಅಯೋಧ್ಯೆ ಪ್ರಕರಣದ ತೀರ್ಪು ಪ್ರಕಟವಾಗಲು ಇನ್ನು ಕೆಲವು ದಿನಗಳು ಉಳಿದಿವೆ. ಇದರ ನಡುವೆ ಉಗ್ರರ ಕಣ್ಣು ಬಿದ್ದಿದೆ. ಪಾಕಿಸ್ತಾನ ಮೂಲದ ಉಗ್ರರು ದಾಳಿಗೆ ಸಂಚು ರೂಪಿಸಿದ್ದಾರೆ ಅನ್ನೋ ಮಾಹಿತಿಯನ್ನ ಗುಪ್ತಚರ ಇಲಾಖೆ ನೀಡಿದೆ.
ನೇಪಾಳದ ಮೂಲಕ 7 ಜನ ಉಗ್ರರು ಉತ್ತರ ಪ್ರದೇಶಕ್ಕೆ ನುಸುಳಿದ್ದಾರೆ ಅನ್ನೋ ಮಾಹಿತಿ ನೀಡಲಾಗಿದೆ. ಗೋರಖ್ ಪುರ್, ಫೈಝಾಬಾದ್ ಮತ್ತು ಅಯೋಧ್ಯೆ ನಗರಗಳಲ್ಲಿ ಅಡಗಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಇದರಲ್ಲಿ ಐವರನ್ನ ಗುರುತಿಸಲಾಗಿದೆ. ಮೊಹಮ್ಮದ ಯಾಕೂಬ್, ಅಬು ಹಮ್ಜಾ, ನಿಷಾರ್ ಅಹ್ಮದ್, ಮೊಹಮ್ಮದ್ ಷಾಭಾಝ್ ಹಾಗೂ ಮೊಹಮ್ಮದ ಶ್ವಾಮಿ ಚೌಧರಿ ಎಂದು ತಿಳಿದು ಬಂದಿದೆ.
ಉಗ್ರರ ದಾಳಿಯ ಸಂಚು ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಹೆಚ್ಚಿನ ಭದ್ರತೆಗೆ ಒತ್ತು ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.